August 11, 2026

Vokkuta News

kannada news portal

ಪ.ಬಂಗಾಳ: ಮಸೀದಿ, ಮದರಸ, ಧಾರ್ಮಿಕ ಸಂಸ್ಥೆಗಳ ಪೊಲೀಸ್ ಸಮೀಕ್ಷೆ: ಸ್ಪಷ್ಟೀಕರಣ ಕೋರಿದ ಎಪಿಸಿಆರ್.

ಪಶ್ಚಿಮ ಬಂಗಾಳ: ಫಾರ್ಮ್‌ಗಳ ಮೂಲ, ಅಧಿಕಾರ, ಉದ್ದೇಶ ಮತ್ತು ಕಾನೂನು ಆಧಾರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ. ಸಂಗ್ರಹಿಸಿದ ಮಾಹಿತಿಗೆ ಅಪೇಕ್ಷೆಗೆ ಯಾರು ಮೂಲ  ಮತ್ತು ಈ ತರಹದ ಅಂಕಿ ಅಂಶವನ್ನುವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದರ ಕುರಿತು ಪೊಲೀಸ್ ಇಲಾಖೆಯಿಂದ ಎಸೊಸಿಯೇಷ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸ್ಪಷ್ಟೀಕರಣವನ್ನು ಕೋರಿದೆ.

ಎಪಿಸಿಆರ್ ಕಾನೂನುಬದ್ಧ ಆಡಳಿತಾತ್ಮಕ ಪರಿಶೀಲನೆ ಅಥವಾ ಧಾರ್ಮಿಕ ಸಂಸ್ಥೆಗಳ ಸರಿಯಾದ ದಾಖಲೆಗಳನ್ನು ನಿರ್ವಹಿಸುವ ಪ್ರಯತ್ನಗಳನ್ನು ವಿರೋಧಿಸುವುದಿಲ್ಲ ಎಂದು ಕೂಡಾ ಹೇಳಿದೆ.

ಆದಾಗ್ಯೂ, ಅಂತಹ ಪ್ರಕ್ರಿಯೆಗಳು “ಪಾರದರ್ಶಕ, ಕಾನೂನುಬದ್ಧ ಮತ್ತು ತಾರತಮ್ಯರಹಿತ” ವಾಗಿರಬೇಕು ಮತ್ತು ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯದ ಪ್ರೊಫೈಲಿಂಗ್ ಅಥವಾ ಆಯ್ದ ಗುರಿಗೆ ಕಾರಣವಾಗಬಾರದು ಎಂದು ಅದು ಒತ್ತಿ ಹೇಳಿದೆ.

ಇದು ಅಧಿಕೃತ ಸರ್ಕಾರಿ ಸಮೀಕ್ಷೆಯಾಗಿದ್ದರೆ, ಸರ್ಕಾರಿ ಆದೇಶವನ್ನು ಸಾರ್ವಜನಿಕಗೊಳಿಸಲಿ” ಎಂದು ಎಪಿಸಿಆರ್ ಹೇಳಿದೆ. “ಇದು ಪೊಲೀಸ್ ಉಪಕ್ರಮವಾಗಿದ್ದರೆ, ಅಧಿಕಾರಿಗಳು ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಧಾರ್ಮಿಕ ಸಂಸ್ಥೆಗಳಿಂದ ಅಂತಹ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಎಂದು ಎಪಿಸಿಆರ್ ಒತ್ತಾಯಿಸಿದೆ.