ಮಂಗಳೂರು: ಇತ್ತೀಚೆಗಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಿನ್ನೆ ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ಬಂಧಿಸಿ ದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆ ಗೊಳಿಸ ಬೇಕೆಂದು ಆಗ್ರಹಿಸಿ ಇಂದು ಸಂಘಟನೆಯ ಸದಸ್ಯರು ಉಪ್ಪಿನಂಗಡಿ ಪೊಲೀಸು ಸ್ಟೇಶನ್ ಎದುರಿಗೆ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದು ಪೊಲೀಸರು ಅಪ್ರಚೋಧಿತವಾಗಿ ಪ್ರತಿಭಟನಾಕಾರರ ಮೇಲೆ ಅನ್ಯಾಯವಾಗಿ ಲಾಠಿ ಚಾರ್ಜ್ ಮಾಡಿದ್ದು, ಅಮಾಯಕ ಪ್ರತಿಭಟನಾಕಾರರು ಘಂಭೀರ ಗಾಯ ಗೊಂಡಿದ್ದು,ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜ.ಆತೂರ್ ಇಬ್ರಾಹಿಂ ತಂಗಲ್ ರವರಿಗೆ ರಕ್ತ ಗಾಯವಾಗಿದ್ದು,ಪೊಲೀಸರ ದೌರ್ಜನ್ಯ ಕ್ಕೇ ತೀವ್ರ ಖಂಡನೆಯಿದೆ.ಪೊಲೀಸರು ಶಾಂತಿ ಕಾಪಾಡುವುದರ ಹೊರತು,ಹಿಂಸೆಯನ್ನು ಪ್ರಚೋದಿಸಿ ದ್ದಾರೆ. ಪೊಲೀಸರ ಈ ದೌರ್ಜನ್ಯವನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಿನ್ನೆಯ ಪೊಲೀಸು ದೌರ್ಜನ್ಯ ಖಂಡಿಸಿ ಇಂದು ಪಿ. ಎಫ್ಫ್. ಐ.ಸಂಘಟನೆ ಮಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿ ಕೊಂಡಿದೆ.
ಅಮಾಯಕರ ಬಂಧನ ವಿರೋಧಿಸಿ ನಡೆಸಿದ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸು ಲಾಠಿ ಚಾರ್ಜ್.
ಇನ್ನಷ್ಟು ವರದಿಗಳು
ಭಯ, ಒಲವು, ವಾತ್ಸಲ್ಯ, ದ್ವೇಷ’ ರಹಿತ ಆಡಳಿತ ಪ್ರಮಾಣವಚನದ ಉಲ್ಲಂಘನೆ:ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮು.ಮಂ.ಸ್ಥಾನಕ್ಕೆ ರಾಜೀನಾಮೆ ನೀಡಲಿ:ಪಿಯುಸಿಎಲ್.
ಇಸ್ರೇಲ್ನ ಗಾಝ ನರಮೇಧವು ಜಾಗತಿಕ ವ್ಯವಸ್ಥೆಗೆ ಅಪಾಯವಾಗಲಿದೆ: ಅಲ್ ಜಝೀರಾ ಫೋರಂನಲ್ಲಿ ಅಬ್ಬಾಸ್ ಎಚ್ಚರಿಕೆ.
ಜಾಗತಿಕ ಮಾನವ ಹಕ್ಕುಗಳ ಸ್ಥಿತಿ ಅಪಾಯದಲ್ಲಿದೆ : ಹ್ಯೂಮನ್ ರೈಟ್ಸ್ ವಾಚ್ ವರದಿ, ಎಚ್ಚರಿಕೆ.