ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆ ಎಂಬಲ್ಲಿ ಇತ್ತೀಚೆಗೆ ನಡೆದ ಎರಡು ಭಿನ್ನ ಕೊಲೆಗಳು ಮತ್ತು ಅದರ ನಂತರ ಸುರತ್ಕಲ್ ನಲ್ಲಿ ನಡೆದ ಭಿನ್ನ ಸಮುದಾಯದ ಯುವಕನ ಕೊಲೆಯ ನಂತರ ಜಿಲ್ಲೆ ಮತ್ತು ರಾಜ್ಯದಲ್ಲಿ ಈ ಕೊಲೆಗಳನ್ನು ಕೇಂದ್ರೀಕರಿಸಿ ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆದು ಸರಕಾರ ಈ ಹಂತದಲ್ಲಿ ಹತ್ಯೆಯಾದ ಬಿ. ಜೇ. ಪೀ ಯ ಕಾರ್ಯಕರ್ತನಾದ ಸುಳ್ಯದ ಪ್ರವೀಣ್ ನೆಟ್ಟಾರು ಎಂಬಾತನ ಹತ್ಯೆಯ ತನಿಖೆಯನ್ನು ರಾಜ್ಯ ಸರಕಾರ ಕೇಂದ್ರ ತನಿಖಾ ತಂಡಕ್ಕೆ ವಹಿಸಿ ಕೊಟ್ಟಿತ್ತು.
ಈ ಮದ್ಯೆ ಪ್ರವೀಣ್ ನೆಟ್ಟಾರುವಿನ ಹತ್ಯೆಯನ್ನು ವೈಭವೀಕರಿಸಿ ಆಡಳಿತದಲ್ಲಿ ಇರುವ ಬಿ. ಜೇ.ಪೀ, ಬಿನ್ನ ಸಮುದಾಯದ ವಿರುದ್ಧ ವೈರತ್ವ ರಾಜಕೀಯ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎನ್. ಐ. ಎ ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಕ ಸಂಘಟನೆಯ ಪದಾಧಿಕಾರಿಗಳನ್ನು ಗುರಿಯಾಗಿಸಿ, ಸಂಘಟನೆಯ ಪದಾಧಿಕಾರಿಗಳು,ಕಾರ್ಯ ಕರ್ತರ ವಿರುದ್ಧ ಎನ್. ಎ. ಐ.ಸಂಸ್ಥೆಯು ಧಾಳಿ ನಡೆಸಿ ಅಮಾಯಕರನ್ನು ಭಂಧಿ ಸುವುದರ ವಿರುದ್ಧ ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಿಯಾಝ್ ಪರಂಗಿಪೇಟೆ ಯ ಮನೆಗೆ ಇಂದು ಧಾಳಿ ನಡೆಸಿದರ ವಿರುದ್ಧ ಎನ್. ಐ .ಎ ವಿರುದ್ಧ ನಗರದ ಕ್ಲಾಕ್ ಟವರ್ ಬಳಿ ಇಂದು ಸಂಜೆ ಪ್ರತಿಭಟನಾ ಸಭೆ ನಡೆಯಿತು.
ಸಭೆಯಲ್ಲಿ ಎನ್. ಐ. ಎ ಧಾಳಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಎನ್. ಐ.ಎ ವಿರುದ್ಧ ಘೋಷಣೆ ಕೂಗಲಾಯಿತು. ಸಭೆಯನ್ನು ಉದ್ದೇಶಿಸಿ,ಎಸ್.ಡಿ.ಪೀ. ಐ ಯ ಅಬೂಬಕ್ಕರ್ ಕುಳಾಯಿ, ಇಮಾಮ್ ಕೌನ್ಸಿಲ್ ನ ಜಾಫರ್ ಸಾದಿಕ್,ಪೀ. ಎಫ್. ಐ ನ ಅಶ್ರಫ್. ಎ.ಕೆ. ಮುಂತಾದವರು ಮಾತನಾಡಿದರು.
ಇನ್ನಷ್ಟು ವರದಿಗಳು
ಸಚಿವ ಮಾಂಕಾಳ ವೈದ್ಯ ಗುಂಡೇಟು ಹೇಳಿಕೆ: ಪಿಯುಸಿಎಲ್ ಕರ್ನಾಟಕ ಖಂಡನೆ,ಪ್ರಕರಣ ದಾಖಲಿಸುವಿಕೆಗೆ ಒತ್ತಾಯ.
ಎನ್ಐಎ ಲಕ್ನೋ ನ್ಯಾಯಾಲಯ ತೀರ್ಪು: ಮಾನವ ಹಕ್ಕು ಸಂಘಟನೆಗಳ ಬಗ್ಗೆ ನಕಾರಾತ್ಮಕ ಉಲ್ಲೇಖ,ಪಿಯುಸಿಎಲ್ ಪ್ರತಿಕ್ರಿಯೆ.
ರವಿಕಿರಣ್ ಜೈನ್ ರಂತಹ ಓರ್ವ ಸಮರ್ಥ ಹಕ್ಕು ಕಾರ್ಯಕರ್ತನನ್ನು ಪಿಯುಸಿಎಲ್ ಕಳೆದು ಕೊಂಡಿದೆ, ಸಂತಾಪ; ಕವಿತಾ ಶ್ರೀವಾಸ್ತವ.