ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಬಾವ್ಯ ಕದನ ವಿರಾಮ ಮತ್ತು ಕೈದಿಗಳ ವಿನಿಮಯ ಒಪ್ಪಂದದ ಕುರಿತು ಕತಾರ್ ದೇಶದ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು “ಪ್ರಗತಿಯಲ್ಲಿ ಸಾಗುತ್ತಿವೆ ಮತ್ತು ಮುಂದುವರಿದ ಹಂತದಲ್ಲಿದೆ” ಎಂದು ಅಲ್ ಜಝೀರಾ ಮಾದ್ಯಮ ಮೂಲಗಳು ಹೇಳುತ್ತಿವೆ.
ಕೇವಲ “ಬೆರಳೆಣಿಕೆಯಷ್ಟು” ನೆರವು ಪೂರೈಕೆಯ ಬೆಂಗಾವಲುಗಳನ್ನು ಮಾತ್ರ ಗಾಝಾಕ್ಕೆ ಅನುಮತಿಸಲಾಗಿದೆ ಮತ್ತು ದಿಗ್ಬಂಧನ ಹಾಕಿದ ಮತ್ತು ಬಾಂಬ್ ದಾಳಿಗೊಳಗಾದ ಪ್ಯಾಲೆಸ್ಟೀನಿಯಾದ ಪರಿಸ್ಥಿತಿಯು ನಿಯಂತ್ರಣದಿಂದ ರಹಿತವಾಗಿದೆ ಎಂದು ಯುಎನ್ನ ಪ್ಯಾಲೆಸ್ಟೈನ್ ನಿರಾಶ್ರಿತರ ಏಜೆನ್ಸಿಯ ಕಮಿಷನರ್-ಜನರಲ್ ಫಿಲಿಪ್ ಲಝಾರಿನಿ ಹೇಳುತ್ತಾರೆ. “ಗಾಝಾದ ಕತ್ತು ಹಿಸುಕಲಾಗುತ್ತಿದೆ.” ಎಂದಿದ್ದಾರೆ.
ಕತಾರ್ ದೇಶವು ಪೂರ್ಣ ಕದನ ವಿರಾಮ ಮತ್ತು ಕೈದಿಗಳ ಬಿಡುಗಡೆಗೆ ಕರೆ ನೀಡಿದೆ
ಕತಾರ್ ತಕ್ಷಣವೇ ಕದನ ವಿರಾಮ ಮತ್ತು ಗಾಝಾ ಯುದ್ಧದಲ್ಲಿ ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಲು ಕರೆ ನೀಡಿದೆ.
“ಮುಗ್ಧ ನಾಗರಿಕರ ವಿರುದ್ಧ ಇಸ್ರೇಲಿ ದಾಳಿಗಳು ದುರಂತವಾಗಿ ಮಾರ್ಪಟ್ಟಿವೆ ಮತ್ತು ಈ ಪ್ರದೇಶ ಮತ್ತು ಜಗತ್ತನ್ನು ಬೆದರಿಸುವ ರೀತಿಯಲ್ಲಿ ಉಲ್ಬಣ ಗೊಳ್ಳ ಬಹುದು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ತನ್ನ ಚಾರ್ಟರ್ ಅಡಿಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಫಲವಾಗಿರುವುದಕ್ಕೆ ನಾವು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತೇವೆ ”ಎಂದು ಯುಎನ್ಗೆ ಕತಾರ್ನ ರಾಯಭಾರಿ ಶೇಖಾ ಅಲ್ಯ ಅಹ್ಮದ್ ಸೈಫ್ ಅಲ್ ಥಾನಿ ಹೇಳಿದರು.
“ನಾವು ಉಲ್ಬಣಗೊಳ್ಳುವಿಕೆ, ಪೂರ್ಣ ಕದನ ವಿರಾಮ ಮತ್ತು ಎಲ್ಲಾ ಕೈದಿಗಳ ವಿಶೇಷವಾಗಿ ನಾಗರಿಕರ ಬಿಡುಗಡೆಗಾಗಿ ನಮ್ಮ ಕರೆಗಳನ್ನು ನವೀಕರಿಸುತ್ತೇವೆ. ಎಲ್ಲಾ ರೀತಿಯ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸುವ ನಮ್ಮ ಖಂಡನೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಸೈಫ್ ಅಲ್ದಾನಿ ಹೇಳಿದರು.
ಇನ್ನಷ್ಟು ವರದಿಗಳು
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ,ಇಸ್ರೇಲ್ ಗುರಿಯಾಗಿಸಿ ಇಝ್ ಬುಲ್ಲಾ ರಾಕೆಟ್ ಪ್ರತಿದಾಳಿ.
ಒಲಿಂಪಿಕ್ ಸ್ಪರ್ಧೆ: ವಿನೇಶ್ ಫೋಗಟ್ ಅನರ್ಹ, ಪ್ಯಾರಿಸ್ ಭಾರ ಕುಸ್ತಿಯಲ್ಲಿ ಪದಕ ರಹಿತ.
ಶೇಖ್ ಹಸೀನಾ ರಾಜೀನಾಮೆ: ಮಾಜಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಗುಪ್ತ ಏರ್ಬೇಸ್ನಲ್ಲಿ ಎನ್ಎಸ್ಎ ಅಜಿತ್ ದೋವಲ್ ರನ್ನು ಭೇಟಿ.