August 12, 2026

Vokkuta News

kannada news portal

ಪಿ.ಎ.ಪ್ರಥಮ ಗ್ರೇಡ್ ಕಾಲೇಜು ರಕ್ತದಾನ ಶಿಬಿರ ಆಯೋಜನೆ: ರೆಡ್ ಕ್ರಾಸ್ ಸಂಸ್ಥೆಯಿಂದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವರಿಗೆ  ಸನ್ಮಾನ.

ಮಂಗಳೂರು: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ. ಕ.ಜಿಲ್ಲಾ ಸಂಸ್ಥೆಯು ತನ್ನ ಕಾರ್ಯ ವ್ಯಾಪ್ತಿಯ ಚಟುವಟಿಕೆಗಳಾದ ನಿರಂತರ ರಕ್ತ ದಾನ ಶಿಬಿರ ಆಯೋಜನೆ ಮತ್ತಿತರ ಸಾಧನೆಗಾಗಿ ತನ್ನ ಸದಸ್ಯರಿಗೆ ಹಲವು ಸನ್ಮಾನಗಳನ್ನು ಮಾಡಿದೆ.

ದ. ಕ.ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪಿಎ ಪ್ರಥಮ ಗ್ರೇಡ್ ಕಾಲೇಜುವಿನಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಲೇಜು ಪ್ರಿನ್ಸಿಪಾಲ್ ಡಾಕ್ಟರ್ ಸರ್ಫ್ರಾಝ್ ರವರ ಸಹಕಾರದೊಂದಿಗೆ ನಡೆದ ರಕ್ತದಾನ ಶಿಬಿರ ಆಯೋಜನೆ ಉತ್ತೇಜನಕ್ಕಾಗಿ ಸಮಾಜ ಸೇವಕರಾದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವಾರು ಸಾಧಕರಿಗೆ ಇಂದು ರೆಡ್ ಕ್ರಾಸ್ ಸಂಸ್ಥೆ ಪ್ರಶಸ್ತಿ ಪತ್ರ ನೀಡಿ ಸನ್ಮಾನ ಮಾಡಿದೆ. ಸನ್ಮಾನ ಸಮಾರಂಭದಲ್ಲಿ ರೆಡ್ ಕಕ್ರಾಸ್ ಸಂಸ್ತೆಯ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಸ್ಥಳೀಯ ಶಾಸಕರು ಉಪಸ್ತಿತರಿದ್ದರು.