ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ತಮ್ಮ ವಿರುದ್ಧ ಹೊರಡಿಸಲಾದ ಫತ್ವಾಕ್ಕೆ ಪ್ರತಿಕ್ರಿಯಿಸಿದರು ಮತ್ತು ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಭಾನುವಾರದಂದು ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ, ಆದರೆ ರಾಮಮಂದಿರ ಕಾರ್ಯಕ್ರಮದ ಸಂಜೆಯಿಂದ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಎ ಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತನ್ನ ವಿರುದ್ಧದ ಫತ್ವಾಕ್ಕೆ ಪ್ರತಿಕ್ರಿಯಿಸಿದ ಇಮಾಮ್, “ನನ್ನನ್ನು ಪ್ರೀತಿಸುವವರು, ರಾಷ್ಟ್ರವನ್ನು ಪ್ರೀತಿಸುವವರು – ನನ್ನನ್ನು ಬೆಂಬಲಿಸುತ್ತಾರೆ, ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು, ಎಂದು ಹೇಳಿದ್ದಾರೆ.
ಇನ್ನಷ್ಟು ವರದಿಗಳು
‘ತಾರತಮ್ಯ’ ಕೇಂದ್ರ ಬಜೆಟ್: ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸಲಿರುವ ಕಾಂಗ್ರೆಸ್ ಸಿಎಂಗಳು: ಕೆಸಿ ವೇಣುಗೋಪಾಲ್.
ಕನ್ವರ್ ಯಾತ್ರಾ ಮಾರ್ಗ, ತಿನಿಸು ಸಿಬ್ಬಂದಿ ಹೆಸರು ಬಹಿರಂಗಪಡಿಸುವಿಕೆ, ಉತ್ತರಾಖಂಡ, ಯುಪಿ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹರಿಯಾಣದ ನುಹ್ನಲ್ಲಿ ಮೊಬೈಲ್ ಇಂಟರ್ನೆಟ್ 24 ಗಂಟೆಗಳ ಕಾಲ ಸ್ಥಗಿತ, ಹಿಂದೂ ಧರ್ಮೀಯ ಬೃಜ್ ಮೆರವಣಿಗೆ ಹಿನ್ನೆಲೆ.