ಬೆಂಗಳೂರು: ಉದ್ಯೋಗಗಳಲ್ಲಿ ಮುಸ್ಲಿಂ ಮೀಸಲಾತಿಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಗಣಿಸುತ್ತಿದೆ ಎಂಬ ಮಾಧ್ಯಮ ವರದಿಗಳಿಗೆ ಕರ್ನಾಟಕ ಮುಖ್ಯಮಂತ್ರಿ ಕಚೇರಿ (CMO) ಮಂಗಳವಾರ ಪ್ರತಿಕ್ರಿಯಿಸಿದ್ದು, ವರದಿಗಳನ್ನು “ಮತ್ತೊಂದು ಹೊಸ ಸುಳ್ಳು” ಎಂದು ಕರೆದಿದೆ.
ಮೀಸಲಾತಿಗೆ ಬೇಡಿಕೆ ಇದ್ದರೂ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ’ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿಯ ವಿಷಯದ ಸುತ್ತ ನಡೆಯುತ್ತಿರುವ ವಿವಾದಗಳ ನಡುವೆ ಈ ಸ್ಪಷ್ಟನೆ ಬಂದಿದೆ. ‘ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ’ ಎಂದು ಸಿಎಂಒ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮೀಸಲಾತಿಗೆ ಬೇಡಿಕೆ ಬಂದಿರುವುದು ನಿಜ. ಆದರೆ, ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸಿಎಂ ಕಚೇರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ.
ಇನ್ನಷ್ಟು ವರದಿಗಳು
ಕರ್ನಾಟಕ ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ: ನಿವೃತ್ತ ಐ.ಎ.ಎಸ್ ಅಧಿಕಾರಿ ಎಲ್.ಕೆ. ಅತೀಕ್ ಹೆಸರು ಮುಂಚೂಣಿಯಲ್ಲಿ.
ಬೆಂ.ಮುಸ್ಲಿಮ್ ಸಮಾವೇಶದ ಸಂದೇಶ ಸರ್ಕಾರಕ್ಕೆ ರವಾನೆ ಆಗಲಿದೆ : ಮುಸ್ಲಿಮ್ ವಾಯ್ಸ್ ಆನ್ಲೈನ್ ಸಂವಾದದಲ್ಲಿ ರಫಿಉದ್ದೀನ್ ಕುದ್ರೋಳಿ.
ಬೆಂಗಳೂರು, ಮೇ 16. ರಾಜ್ಯ ಮುಸ್ಲಿಮ್ ಸಮ್ಮೇಳನ, ಸರಕಾರದ ಭರವಸೆ, ಈಡೇರಿಕೆ, ನಿರ್ಲಕ್ಷ್ಯಗಳ ವರದಿ ಬಿಡುಗಡೆ.