ಮಂಗಳೂರು: ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಸುಗಮ ಸಂವಹನ ಉದ್ದೇಶದಿಂದ, ಬ್ಯಾರಿ ಕಲಾ ರಂಗ ನಿಯೋಗದಿಂದ ಇಂದು ಮಂಗಳೂರು ನಗರ ಪೊಲೀಸು ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿರವರನ್ನು ಭೇಟಿ ಮಾಡಿ ಅಬ್ದುಲ್ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೋರು ಕೃತಿಯನ್ನು ಹಂಚಲಾಯಿತು.
ದ.ಕ.ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯ ಬ್ಯಾರಿ ಬಾಷೆ ಮಾತನಾಡುತ್ತಿದ್ದು, ಸಾರ್ವಜನಿಕ ಸೇವಾ ವಲಯದಲ್ಲಿ ಸುಗಮ ಸಂವಹನಕ್ಕೆ ಅನುಕೂಲವಾಗುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬ್ಯಾರಿ ಭಾಷೆಯ ಬಗ್ಗೆ ಸ್ಪರ್ಷತೆ ಹೊಂದಲು ಬ್ಯಾರಿ ಕಲಾರಂಗ ಇತ್ತೀಚೆಗೆ ಬ್ಯಾರಿ ಪದಪುಂಜ ಹೊಂದಿರುವ ಕೃತಿ ರಚಿಸಿ ಬಿಡುಗಡೆ ಮಾಡಿತ್ತು
ಈ ನಿಟ್ಟಿನಲ್ಲಿ ಇಂದು ಬ್ಯಾರಿಕಲಾ ರಂಗ ನಿಯೋಗ ಅಬ್ದುಲ್ ಅಝೀಝ್ ಬೈಕಂಪಾಡಿ ನೇತೃತ್ವದಲ್ಲಿ ಬ್ಯಾರಿ ಬಾಷೆ ಪಡಿಕೋರು ಕೃತಿಗಳನ್ನು ಮಂಗಳೂರು ನಗರ ಪೊಲೀಸು ಆಯುಕ್ತಾಲಯಕ್ಕೆ ಹಸ್ತಾಂತರಿಸಿತು.. ನಿಯೋಗದಲ್ಲಿ ಹುಸೈನ್ ಕಾಳಿಪಳ್ಳ, ಅಬ್ದುಲ್ ಅಝೀಝ್ ಕಂದಾವರ ಮತ್ತು ಮೊಹಮ್ಮದ್ ಹನೀಫ್ ಯು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ಡಾ.ಕಯ್ಯಾರ ಕಿಞ್ಞಣ್ಣ ರೈ ಜಯಂತಿಯಲ್ಲಿ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೊರು ಕೃತಿ ಹಂಚಿಕೆ.
ಜೂ 23. ದ.ಕ.ಜಿಲ್ಲೆಯಲ್ಲಿ ನಡೆದ ಎಲ್ಲಾ ದ್ವೇಷ ಹತ್ಯೆಗಳ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಿಪಿಎಂ ಪ್ರತಿಭಟನೆ.