July 27, 2024

Vokkuta News

kannada news portal

ಅಗಲಿದ ಮುಖ್ಯಸ್ಥ ಅಮೀರ್ ತುಂಬೆಗೆ ಮುಸ್ಲಿಮ್ ಜಸ್ಟಿಸ್ ಫಾರಂ ಸಂತಾಪ ಸಭೆ.

ಮಂಗಳೂರು: ಜು.28. ಕರ್ನಾಟಕ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ, ಮುಸ್ಲಿಮ್ ಜಸ್ಟೀಸ್ ಫಾರಂ ನ ಮುಖ್ಯಸ್ಥ ದಿ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ ರವರು ಇತ್ತೀಚೆಗೆ ನಿಧನ ಹೊಂದಿದ್ದು,ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಮಂಗಳೂರು ಕೇಂದ್ರಿತ ಎನ್.ಜಿ. ಒ ಮುಸ್ಲಿಮ್ ಜಸ್ಟೀಸ್ ಫಾರಂ ಇಂದು ಮಂಗಳೂರಿನ ಕಂಕನಾಡಿ ಯ ಜಮ್ಮಿಯತುಲ್ ಫಲಾ ಹ್ ಸಭಾಂಗಣದಲ್ಲಿ ಅಗಲಿದ ಕೆ.ಎಸ್.ಅಮೀರ್ ಅಹಮದ್ ತುಂಬೆ ರವರಿಗೆ ಸಂತಾಪ ಸಲ್ಲಿಸಿತು.

ಸಂತಾಪ ಸಭೆಯನ್ನು ಉದ್ದೇಶಿಸಿ,ಸಂಸ್ಥೆಯ ಪ್ರಮುಖರಾದ ರಫೀಯು ದ್ದೀನ್ ಕುದ್ರೋಳಿ ಮಾತನಾಡಿ ಅಮೀರ್ ರವರ ಗುಣ ವಿಶೇಷ,ನಾಯಕತ್ವ ಗುಣ,ಸಮುದಾಯದ ಬಗ್ಗೆ ಅವರ ಕಾಳಜಿ, ಜನರು ಅವರ ಅನಾರೋಗ್ಯ ಕಾಲದಲ್ಲಿ ಅವರಲ್ಲಿ ಪ್ರದರ್ಶಿಸಿದ ಪ್ರೀತಿ,ಒಲವು ಬಗ್ಗೆ ಮಾತನಾಡಿದರು.ಇಂದು ನಾವು ಓರ್ವ ಎರಡನೇ ಪೀಳಿಗೆಯ ಉತ್ತಮ ನಾಯಕನನ್ನು ಕಳೆದು ಕೊಂಡಿದ್ದೇವೆ ಎಂದು ಹೇಳಿದರು. ರಫೀಯುದೀನ್ ಕೊನೆಯಲ್ಲಿ ಮೃತರ ಆತ್ಮ ಶಾಂತಿಗಾಗಿ ಪ್ರಾರ್ಥಿಸಿದರು.

ಅಮೀರ್ ತುಂಬೆ ಯ ಹಲವು ವರ್ಷದ ಗೆಳೆಯರಾದ ಹನೀಫ್ ಖಾನ್ ಕೊಡಾಜೆ ಮಾತನಾಡಿ ಅಮೀರ್ ರವರು ಓರ್ವ ಪಕ್ಷ ರಹಿತ ಮನೋಭಾವನೆಯ ವ್ಯಕ್ತಿ ಆಗಿದ್ದರು.ಅದೆಷ್ಟೋ ಜನರ ಸೇವೆ,ಸಹಾಯ,ನೆರವು ಬಗ್ಗೆ ಹನೀಫ್ ವಿವರಿಸಿದರು.ಅಮೀರ್ ರವರ ಚಿಕಿತ್ಸಾ ಸಂದರ್ಭಗಳಲ್ಲಿ ಉಪಸ್ಥಿತರಿದ್ದ ಪ್ರಮುಖ ವ್ಯಕ್ತಿಗಳ ಸಹಕಾರವನ್ನು ಸ್ಮರಿಸಿದರು.

ಸಭಿಕರ ವತಿಯಿಂದ ಅಸ್ಗರ್ ಮುಡಿಪು,ಝಾಕಿರ್ ಉಳ್ಳಾಲ್,ಮುಸ್ತಫಾ ಹರೇಕಳ ಮಾತನಾಡಿದರು.

ಅಮೀರ್ ಅಹಮದ್ ರವರ ಸಹೋದರ ಅಬ್ದುಲ್ ಲತೀಫ್,ಎಂ.ಏಚ್ ಬಾವ ಮತ್ತು ಇನ್ನಿತರ ಹಿರಿಯ ಕುಟುಂಬಸ್ಥರು ಉಪಸ್ಥಿತರಿದ್ದು,ಸಂಸ್ಥೆಯ ಸದಸ್ಯ ಅಬ್ದುಲ್ಲಾ ಪಾರೆ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ವಹಾಬ್ ಕುದ್ರೋಳಿ ನಿರೂಪಿಸಿದರು.