ಮಂಗಳೂರು; ದ.ಕ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ,ಸರಕಾರೇತರ ಸಂಸ್ಥೆಯ ತಾತ್ಕಾಲಿಕ ಆಡಳಿತ ಸಮಿತಿಯಾಗಿ ಟಿ.ರ್ ಭಟ್, ಸಂಚಾಲಕರು, ಕಿಶೋರ್ ಅತ್ತಾವರ್, ಜೋಷಿ ಸತ್ಯಾನಂದ ಜಿ.,ಕಾಲಿನ್ ಡಿಸಿಲ್ವ ಮತ್ತು ಮೊಹಮ್ಮದ್ ಹನೀಫ್.ಯು ರವರನ್ನು ಕೇಂದ್ರ ಪಿಯುಸಿಎಲ್ನ ಪದಾಧಿಕಾರಿಗಳು ನೇಮಕ ಮಾಡಿ ಘೋಷಿಸಿರುತ್ತಾರೆ.
ತಾರೀಖು 8 ಮತ್ತು 9 ಮಾರ್ಚ್ 2024 ರಂದು ಮಂಗಳೂರು ರೋಶನಿ ನಿಲಯದಲ್ಲಿ ನಡೆದ ದ್ವಿದಿನ ಸಭೆಯಲ್ಲಿ ರಾಷ್ಟ್ರೀಯ ಪಿಯುಸಿಎಲ್ನ ಮಹಾ ಪ್ರದಾನ ಕಾರ್ಯದರ್ಶಿ ಯಾದ ಡಾ.ವಿ.ಸುರೇಶ್, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾದ ಎಸ್. ಬಾಲಮುರುಗನ್,ಕರ್ನಾಟಕ ರಾಜ್ಯ ಪಿಯುಸಿಎಲ್ ನ ಅದ್ಯಕ್ಷರಾದ, ಅರವಿಂದ ನರೈನ್, ಪ್ರದಾನ ಕಾರ್ಯದರ್ಶಿ,ಸುಜಾಯಾತುಲ್ಲಾ.ಕೆ ಇವರ ತಂಡ, ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸರ್ವಾನುಮತದಿಂದ ತಾತ್ಕಾಲಿಕ ಸಮಿತಿಯನ್ನು ರಚಿಸಿಸಿದೆ.
ದ.ಕ. ಪಿಯುಸಿಎಲ್ ಈ ಹಿಂದೆ ಜಿಲ್ಲೆಯಲ್ಲಿನ ಸಮಿತಿಯನ್ನು ರದ್ದು ಪಡಿಸಿತ್ತು. ಪ್ರಸ್ತುತ ಮೇಲಿನ ತಾತ್ಕಾಲಿಕ ಆಡಳಿತ ಸಮಿತಿ ನೇಮಕವಾಗುವುದರೊಂದಿಗೆ ಜಿಲ್ಲೆಯಲ್ಲಿ ಪಿ.ಯು.ಸಿ.ಎಲ್ ಘಟಕ ಕಾರ್ಯಾರಂಭ ಗೊಳಿಸಲಿದೆ. ಜಿಲ್ಲೆಯ ಸುಮಾರು 22 ಸದಸ್ಯರು ಹಾಜರಿದ್ದರು.
ಇನ್ನಷ್ಟು ವರದಿಗಳು
ಜು.24 , ನಗರದಲ್ಲಿ ‘ ವೀ ಪೀಪಲ್ ಆಫ್ ಇಂಡಿಯಾ ‘ ವತಿಯಿಂದ ದೆಹಲಿ ವಿದ್ಯಾರ್ಥಿ – ದೌರ್ಜನ್ಯ ವಿರೋಧಿಸಿ ರ್ಯಾಲಿ: ಸಮಾನ ಮನಸ್ಕ ಒಕ್ಕೂಟದ ಬೆಂಬಲ.
ಪಿ.ಎ.ಪ್ರಥಮ ಗ್ರೇಡ್ ಕಾಲೇಜು ರಕ್ತದಾನ ಶಿಬಿರ ಆಯೋಜನೆ: ರೆಡ್ ಕ್ರಾಸ್ ಸಂಸ್ಥೆಯಿಂದ ಅಬ್ಬಾಸ್ ಉಚ್ಚಿಲ್ ರೊಳಗೊಂಡು ಹಲವರಿಗೆ ಸನ್ಮಾನ.
ತೋಟಾಳ್ ಟಿ.ಕೆ.ಇಸ್ಮಾಯಿಲ್ ನಿಧನ: ಸೋ.ಮೀಡಿಯಾ ಯಾಕ್ಟಿವಿಸ್ಟ್ ಅಶ್ಫಾಕ್ ರವರಿಗೆ ಪಿತೃ ವಿಯೋಗ: