ಮಂಗಳೂರು; ದ.ಕ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ,ಸರಕಾರೇತರ ಸಂಸ್ಥೆಯ ತಾತ್ಕಾಲಿಕ ಆಡಳಿತ ಸಮಿತಿಯಾಗಿ ಟಿ.ರ್ ಭಟ್, ಸಂಚಾಲಕರು, ಕಿಶೋರ್ ಅತ್ತಾವರ್, ಜೋಷಿ ಸತ್ಯಾನಂದ ಜಿ.,ಕಾಲಿನ್ ಡಿಸಿಲ್ವ ಮತ್ತು ಮೊಹಮ್ಮದ್ ಹನೀಫ್.ಯು ರವರನ್ನು ಕೇಂದ್ರ ಪಿಯುಸಿಎಲ್ನ ಪದಾಧಿಕಾರಿಗಳು ನೇಮಕ ಮಾಡಿ ಘೋಷಿಸಿರುತ್ತಾರೆ.
ತಾರೀಖು 8 ಮತ್ತು 9 ಮಾರ್ಚ್ 2024 ರಂದು ಮಂಗಳೂರು ರೋಶನಿ ನಿಲಯದಲ್ಲಿ ನಡೆದ ದ್ವಿದಿನ ಸಭೆಯಲ್ಲಿ ರಾಷ್ಟ್ರೀಯ ಪಿಯುಸಿಎಲ್ನ ಮಹಾ ಪ್ರದಾನ ಕಾರ್ಯದರ್ಶಿ ಯಾದ ಡಾ.ವಿ.ಸುರೇಶ್, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯಾದ ಎಸ್. ಬಾಲಮುರುಗನ್,ಕರ್ನಾಟಕ ರಾಜ್ಯ ಪಿಯುಸಿಎಲ್ ನ ಅದ್ಯಕ್ಷರಾದ, ಅರವಿಂದ ನರೈನ್, ಪ್ರದಾನ ಕಾರ್ಯದರ್ಶಿ,ಸುಜಾಯಾತುಲ್ಲಾ.ಕೆ ಇವರ ತಂಡ, ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸರ್ವಾನುಮತದಿಂದ ತಾತ್ಕಾಲಿಕ ಸಮಿತಿಯನ್ನು ರಚಿಸಿಸಿದೆ.
ದ.ಕ. ಪಿಯುಸಿಎಲ್ ಈ ಹಿಂದೆ ಜಿಲ್ಲೆಯಲ್ಲಿನ ಸಮಿತಿಯನ್ನು ರದ್ದು ಪಡಿಸಿತ್ತು. ಪ್ರಸ್ತುತ ಮೇಲಿನ ತಾತ್ಕಾಲಿಕ ಆಡಳಿತ ಸಮಿತಿ ನೇಮಕವಾಗುವುದರೊಂದಿಗೆ ಜಿಲ್ಲೆಯಲ್ಲಿ ಪಿ.ಯು.ಸಿ.ಎಲ್ ಘಟಕ ಕಾರ್ಯಾರಂಭ ಗೊಳಿಸಲಿದೆ. ಜಿಲ್ಲೆಯ ಸುಮಾರು 22 ಸದಸ್ಯರು ಹಾಜರಿದ್ದರು.
ಇನ್ನಷ್ಟು ವರದಿಗಳು
ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟದ ಅಗತ್ಯವಿದೆ: ಆನ್ ಲೈನ್ ಸಂವಾದದಲ್ಲಿ ನವೀನ್ ಸೂರಿಂಜೆ.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ: ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ.
ಮುನ್ನೂರು ಮನೆಕುಸಿತ ದುರಂತ,ಹರಿದು ಬಂದ ಸಂತಾಪ,ಗಣ್ಯರ ಭೇಟಿ,ಪರಿಹಾರಕ್ಕಾಗಿ ಆಗ್ರಹ,ವಿಪತ್ತು ನಿರ್ವಹಣೆಗೆ ಒತ್ತಡ.