ತಲಪಾಡಿ: ತಲಪಾಡಿ ಗ್ರಾಮದ ಕೆ. ಸಿ ನಗರದ ಅಲ್ ಫಲಾಹ್ ಈದ್ ಮುಸಲ್ಲದಲ್ಲಿ ನಡೆದ ಈದ್ ನಮಾಜ್ ನಂತರ ಖುತುಬಾ ನಿರ್ವಹಿಸಿ ಮಾತನಾಡುತ್ತಾ ಲೋಕದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸುತ್ತಾ, ಎಲ್ಲಾರೂ ಈ ನಿಟ್ಟಿನಲ್ಲಿ ನಿರಂತರ ಪ್ರಾರ್ಥನೆ ನಡೆಸಬೇಕೆಂದು ಕರೆ ನೀಡಿದರು. ನಾವು ಇಲ್ಲಿ ಸುಖ ಸಂತೋಷದಿಂದಿರುವಾಗ ಲೋಕದ ವಿವಿದೆಡೆಗಳಲ್ಲಿ ಹಲವು ಕಾರಣಗಳಿಂದಾಗಿ ಮರ್ದಿಸಲ್ಪಡುತ್ತಿರುವ ಮರ್ದಿತರನ್ನು ನಾವು ಮರೆತುಹೋಗ ಬಾರದು, ಅವರಿಗಾಗಿ ನಮ್ಮ ದುವಾಗಳಲ್ಲಿ ಕೆಲವು ಪದಗಳನ್ನು ಮೀಸಲಿಡ ಬೇಕಿದೆ. ಮೊತ್ತ ಮೊದಲಿಗೆ ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಆರಾಧನೆಗಳನ್ನು ಮೀಸಲಿಡೋಣ, ಅದು ಎಲ್ಲಾ ಪ್ರವಾದಿಗಳ ಸಂದೇಶವಾಗಿತ್ತು. ಈದ್ ದಿನದಂದು ನಮ್ಮ ಸಂಭ್ರಮ ಹದ್ದು ಮೀರದಿರಲಿ, ದುಂದುವೆಚ್ಚ ರಹಿತವಾಗಿರಲಿ. ಕುಟುಂಬ ಸಂಬಂಧಗಳನ್ನು ಬೆಸೆಯುವಂತಾಗಿರಲಿ ಎಂದು ಈದ್ ಸಂದೇಶ ನೀಡಿದರು. ಮಹಿಳೆಯರು, ಮಕ್ಕಳು, ಪುರುಷರೆಲ್ಲಾ ಬಾಗವಹಿಸಿದ ಈ ಈದ್ ಮುಸಲ್ಲವನ್ನು ಅಲ್ ಫಲಾಹ್ ಮಸ್ಜಿದ್ ಸಮಿತಿ, ವಿದ್ಯಾನಗರ, ತಲಪಾಡಿ ಆಯೋಜಿಸಿತು.
kannada news portal
ಇನ್ನಷ್ಟು ವರದಿಗಳು
ಉಳ್ಳಾಲದಲ್ಲಿ ನೂತನ ಡಯಾಲಿಸಿಸ್ ಕೇಂದ್ರ: ಸ್ಥಳೀಯ ರೋಗಿಗಳಿಗೆ ಆದ್ಯತೆಯ ನೋಂದಣಿ
ತಲಪಾಡಿ ಗ್ರಾಮಾಭಿವೃದ್ಧಿ: ಅಧ್ಯಕ್ಷ ಟಿ.ಇಸ್ಮಾಯಿಲ್ ನೇತೃತ್ವದಲ್ಲಿ ಸಮಗ್ರ ನಿಧಿ ಅನುಷ್ಟಾನತೆ.
ಉಳ್ಳಾಲ ನಿವಾಸಿ ಯು.ಕೆ.ಅಬ್ದುಲ್ಲಾ ಕೊಟ್ಟಾರ ನಿಧನ: ಬಸ್ತಾನುಲ್ ಉಲೂಮ್ ಸಂಸ್ಥೆ ಸಂತಾಪ.