March 13, 2026

Vokkuta News

kannada news portal

ರಂಝಾನ್ ಮಸೀದಿ ಕೇಂದ್ರಿತ ಆರಾಧನೆಗಳಿಗೆ ಸಹಕರಿಸುವಂತೆ ಪೊಲೀಸು ಆಯುಕ್ತರಿಗೆ ಮುಸ್ಲಿಮ್ ಒಕ್ಕೂಟ ಮನವಿ

ಮಂಗಳೂರು 14 : ರಂಝಾನ್ ತಿಂಗಳಲ್ಲಿ ಬೆಳಿಗ್ಗಿನ ಫಜರ್ ನಮಾಝ್,ಇಫ್ತಾರ್ ಮತ್ತು ರಾತ್ರಿ ವಿಶೇಷ ತರಾ ವೀಹ್ ನಮಾಝ್ಗೆ ಭೇಟಿ ನೀಡುವ ಮುಸ್ಲಿಮ್ ಸಮುದಾಯದ ವರಿಗೆ , ಸರಕಾರಿ ನಿಯಮಾವಳಿ ಅವಧಿಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಯ ಗೊಳಿಸಿ ಸಹಕರಿಸುವಂತೆ ಮತ್ತು ರಂಝಾನ್ ಸಂದರ್ಭದಲ್ಲಿ ಸಾಂದರ್ಭಿಕ ವಿನಾಯಿತಿ ನೀಡುವಂತೆ ಅಪೇಕ್ಷಿಸಿ ಇಂದು ಕೆ.ಅಶ್ರಫ್ ನೇತೃತ್ವದ ನಿಯೋಗ ಮಂಗಳೂರು ಪೊಲೀಸು ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಸದಸ್ಯರಾದ ಅಬ್ದುಲ್ ಜಲೀಲ್ ಅದ್ದಾಕ ಕೃಷ್ಣಾಪುರ, ಸಿ.ಎಂ. ಮುಸ್ತಫಾ, ಮೊಹಮ್ಮದ್ ಹನೀಫ್.ಯು. ಹಿದಾಯತ್ ಮಾರಿ ಪಳ್ಳ,ಸೋಶಿಯಲ್ ಫಾರೂಕ್ ಮತ್ತು ನೌಷಾದ್ ಬಂದರ್ ಉಪಸ್ಥಿತರಿದ್ದರು.