July 27, 2024

Vokkuta News

kannada news portal

ಟೋಲ್ ವಿರೋಧಿ ನ.18 ರ ತಡಂಬೈಲ್- ಎನ್ ಐ ಟಿ ಕೆ ಜಾಥಾ ಬೆಂಬಲಿಸಲು ಕರೆ: ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ.

ಅಕ್ರಮ ಟೋಲ್ ತೆರವು ಆಗ್ರಹಿಸಿ ಈಗಾಗಲೇ ಸಮಾನ ಮನಸ್ಕ ಸಂಘಟನೆಗಳ ಹಗಲು ರಾತ್ರಿ ಮುಷ್ಕರವನ್ನು ತೀವ್ರ ಗೊಳಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಸರ್ವ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನವಂಬರ್ 18 ರಂದು ಶುಕ್ರವಾರ ಅಪರಾಹ್ನ ಗಂಟೆ 03.00 ಕ್ಕೆ ಸುರತ್ಕಲ್ ತಡಂಬೈಲ್ ಜಂಕ್ಷನ್ ನಿಂದ ಎನ್.ಐ.ಟಿ. ಕೆ ಟೋಲ್ ಧರಣಿ ಸ್ಥಳಕ್ಕೆ , ಅಕ್ರಮ ಟೋಲ್ ತೆರವು ಆಗ್ರಹಿಸಿ, ಹಾಲಿ ಹಗಲು ರಾತ್ರಿ ಧರಣಿಗೆ ಬೆಂಬಲಿಸಿ, ಕೇಂದ್ರ ಸರಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಹಠಮಾರಿ ನಿಲುವು ಮತ್ತು ಜನ ವಿರೋಧಿ ಟೋಲ್ ಸಂಗ್ರಹ ಲೂಟಿ ನೀತಿ ವಿರೋಧಿಸಿ, ಶಾಂತಿಯುತ ಪ್ರಜಾಸತ್ತಾತ್ಮಕ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಈ ಜಾಥಾಕ್ಕೆ ಸರ್ವರೂ ಭಾಗವಹಿಸಿ ಯಶಸ್ವಿ ಗೊಳಿಸಲು ಕರೆ ನೀಡಲಾಗಿದೆ ಎಂದು,ಕೆ.ಅಶ್ರಫ್(ಮಾಜಿ ಮೇಯರ್)ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸುರತ್ಕಲ್ ವಿರೋಧಿತ ಟೋಲ್ ಪ್ಲಾಜಾ