ಪುತ್ತೂರು: ‘ ಅಶ್ರಫ್ ‘ ಹೆಸರಿನ ವ್ಯಕ್ತಿಗಳ ಕರ್ನಾಟಕ ಒಕ್ಕೂಟದ ಸಭೆ ಇಂದು ಅಧ್ಯಕ್ಷರಾದ ಅಶ್ರಫ್ ಕಲ್ಲೇಗ ಅವರ ನೇತೃತದಲ್ಲಿ ಪುತ್ತೂರಿನ ಗೋಲ್ಡನ್ ಗೇಟ್ ಹಾಲ್ ನಲ್ಲಿ ನಡೆಯಿತು. ಸಭೆಯನ್ನು ಅಶ್ರಫ್ ಬಾಖವಿ ಚಾಪಲ್ಲ ಅವರು ದುವಾ ಮೂಲಕ ನೆರವೇರಿಸಿ, ಅಶ್ರಫ್ ಎಂಬ ಹೆಸರಿನ ಮಹತ್ವ ಮತ್ತು ಅತ್ಯಂತ ಉನ್ನತೀಯನು ಎಂಬ ಇಸ್ಲಾಮೀ ಅರ್ಥೈಸುವಿಕೆ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿ ಯಾಗಿದ್ದ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ‘ ಅಶ್ರಫ್ ‘ ನಾಮಾಂಕಿತ ಜಿಲ್ಲಾವಾರು ವ್ಯಕ್ತಿಗಳನ್ನು ಹುಡುಕಿ ಒಕ್ಕೂಟದಲ್ಲಿ ಸೇರ್ಪಡಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಿ ಸಮಾಜಕ್ಕೆ ಪೂರಕ ಸಹಾಯವಾಗುವ ಕಾರ್ಯ ಯೋಜನೆ ರೂಪೀಕರಿಸಬೇಕು ಎಂದು ಕರೆ ನೀಡಿದರು.ಸಭೆಯಲ್ಲಿ ಕೇರಳ ರಾಜ್ಯ ಅಶ್ರಫ್ ಒಕ್ಕೂಟದ ಮುಖ್ಯಸ್ಥರಾದ ಅಶ್ರಫ್ ಕುಂಞಪ್ಪ, ಅಶ್ರಫ್ ಸೆಂಚುರಿ ಮಂಜೇರಿ ಮಂಡಲ, ಮತ್ತು ಎಮ್ ಕೆ ಎಮ್ ಅಶ್ರಫ್ ಕರ್ನೂರು ಹಾಗೂ
ಸಭೆಯಲ್ಲಿ ಕರ್ನಾಟಕದ ಅಶ್ರಫ್ ಆಲಿ, ಸೋಮಾವಾರ ಪೇಟೆ ಕೊಡಗು, ಅಶ್ರಫ್ ಸಿ. ಎ.ಬಾವ, ಅಶ್ರಫ್ ಸಿಟಿ, ಅಶ್ರಫ್ ಕೊಲ್ಲಮುಡಿ, ಅಶ್ರಫ್ ಬಿಳಿಗೆರೆ ಕೊಡಗು,ಅಶ್ರಫ್ ವಿ. ಏಚ್.ವಿಟ್ಲ, ಅಶ್ರಫ್ ಶೇಡಿ ಗುಂಡಿ, ಅಶ್ರಫ್ ಗುಂಡಿ ಸುಳ್ಯ, ಅಶ್ರಫ್ ಮಾಂಚಿ, ಅಶ್ರಫ್ ಕೌನ್ಸಿಲರ್ ವಿಟ್ಲ, ಅಶ್ರಫ್ ಸಿ. ಎಮ್ ಉಳ್ಳಾಲ, ಅಶ್ರಫ್ ಮಾಸ್ಟರ್, ಅಶ್ರಫ್ ಎಟಿಎಂ, ಮೊಹಮ್ಮದ್ ಹನೀಫ್.ಯು,ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಅಶ್ರಫ್ ಆಗ್ನಾಡಿ ವಕೀಲರು ಕಾರ್ಯಕ್ರಮ ನಿರೂಪಿಸಿದರು.
ಅಶ್ರಫ್ ಕರ್ನಾಟಕ ಒಕ್ಕೂಟ, ಎಂಬುದು ಕರ್ನಾಟಕ ರಾಜ್ಯದ ಅಶ್ರಫ್ ನಾಮಾಂಕಿತ ವ್ಯಕ್ತಿಗಳ ಒಟ್ಟು ಸೇರುವಿಕೆ ಮತ್ತು ಸೇವಾ ಉದ್ದೇಶ ಹೊಂದಿದ್ದು, ನೆರೆರಾಜ್ಯ ಕೇರಳದಲ್ಲಿ ಅಶ್ರಫ್ ಕೂಟಾಯಿಮಾ ಎಂಬ ಹೆಸರಲ್ಲಿ ಹಿಂದಿನ ವರ್ಷಗಳಲ್ಲಿ ಸಮಾವೇಶ ನಡೆಸಿ ಯಶಸ್ವಿ ಪ್ರಯೋಗ ನಡೆಸಿದ್ದು ಇಲ್ಲಿ ಗಮನಾರ್ಹ ಎಂದು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪ ವಾಗಿದೆ.

ಇನ್ನಷ್ಟು ವರದಿಗಳು
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ