ನವ ದೆಹಲಿ:ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆನ್ ಆರೋಪಿಸಿದ ಬೆಳವಣಿಗೆಯ ನಂತರ , ಈ ಆರೋಪಗಳ ಬಗ್ಗೆ ತಾನು ತೀವ್ರ ಕಳವಳ ವ್ಯಕ್ತಪಡಿಸಿರುವುದಾಗಿ ಅಮೆರಿಕ ಹೇಳಿಕೆ ನೀಡಿದೆ.
“ಪ್ರಧಾನಿ ಜಸ್ಟಿನ್ ಟ್ರುಡೊ ಬಹಿರಂಗಪಡಿಸಿದ ಆರೋಪಗಳ ಬಗ್ಗೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ತನ್ನ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಕೆನಡಾದ ತನಿಖೆ ಮುಂದುವರೆಯುವುದು ಮತ್ತು ಅಪರಾಧಿಗಳನ್ನು ನ್ಯಾಯದ ಮುಂದೆ ತರುವುದು ನಿರ್ಣಾಯಕವಾಗಿದೆ” ಎಂದು ವ್ಯಾಟ್ಸನ್ ಹೇಳಿದರು.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಸರ್ಕಾರವು ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯನ್ನು “ಭಾರತ ಸರ್ಕಾರದ ಏಜೆಂಟರು” ನೊಂದಿಗೆ ಜೋಡಿಸುವ “ವಿಶ್ವಾಸಾರ್ಹ ಆರೋಪಗಳನ್ನು” ಹೊಂದಿದೆ ಎಂದು ಹೇಳಿದರು.
ಭಾರತವು ಈ ಹೇಳಿಕೆಯನ್ನು “ಅಸಂಬದ್ಧ ಮತ್ತು ಪ್ರೇರಿತ” ಆರೋಪಗಳೆಂದು ತಿರಸ್ಕರಿಸಿದೆ.
ಇಂತಹ ಆಧಾರರಹಿತ ಆರೋಪಗಳು ಖಾಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಗೆ “ಕೆನಡಾದಲ್ಲಿ ಆಶ್ರಯ ನೀಡಿದ್ದು, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೆನಡಾವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಕೆನಡಾದಿಂದ ಹೊರಹಾಕಿದ ನಂತರ ಭಾರತವು ಇಂದು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಮುಂದಿನ ಐದು ದಿನ ಗಳೊಳಗಾಗಿ ಭಾರತ ತೊರೆಯುವಂತೆ ಹೇಳಿದೆ.
ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ಇಂದು ಕರೆಸಲಾಯಿತು ಮತ್ತು ಭಾರತ ಮೂಲದ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಯಿತು, ”ಎಂದು ಸಚಿವಾಲಯ ತಿಳಿಸಿದೆ.
ಹೆಸರು ಹೇಳಲಿಚ್ಛಿಸದ ಕೆನಡಾದ ರಾಜತಾಂತ್ರಿಕರಿಗೆ ಐದು ದಿನಗಳಲ್ಲಿ ದೇಶವನ್ನು ತೊರೆಯುವಂತೆ ತಿಳಿಸಲಾಗಿದೆ.
ಕೆನಡಾ ಮೂಲದ ನಿಜ್ಜರ್ ಅವರನ್ನು ಭಾರತವು ‘ಭಯೋತ್ಪಾದಕ’ ಎಂದು ಗುರುತಿಸಿದೆ. ಜೂನ್ನಲ್ಲಿ ಸರ್ರೆಯ ಗುರುದ್ವಾರದ ಬಳಿ ಅಪರಿಚಿತ ದಾಳಿಕೋರರು ಅವರನ್ನು ಗುಂಡಿಕ್ಕಿ ಕೊಂದರು.
ಹೊಸ ಬೆಳವಣಿಗೆಗಳು ಒಟ್ಟಾವಾ ಮತ್ತು ನವದೆಹಲಿ ನಡುವಿನ ಸಂಬಂಧವನ್ನು ಈಗಾಗಲೇ ಹದಗೆಡಿಸಿದೆ ಮತ್ತು ನಾಟಕೀಯವಾಗಿ ಹೊಸ ಪತನಗತಿಗೆ ಇಳಿಸಿದೆ.
ಇನ್ನಷ್ಟು ವರದಿಗಳು
ನ್ಯೂಜಿಲೆಂಡ್: ಕ್ರೈಸ್ತ ಚರ್ಚ್, ಅಲ್ನೂರ್ ಮಸೀದಿ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಅಲ್ – ಇಸ್ಸಾ.
ಅಮೆರಿಕ ಜೊತೆಗಿನ ದ್ವಿತೀಯ ಮಾತುಕತೆಗೆ ಸಿದ್ಧವಾಗದ ಇರಾನ್, ಪಾಕಿಸ್ತಾನದ ಶಾಂತಿ ಮಾತುಕತೆ ಬಗ್ಗೆ ಅನುಮಾನ ವ್ಯಕ್ತ.
ವಿಶ್ವಸಂಸ್ಥೆ: ಇಸ್ರೇಲ್ – ಅಮೆರಿಕಾಕ್ಕೆ ಯುದ್ಧ ಅಂತ್ಯಗೊಳಿಸಲು, ಇರಾನ್ ಧಾಳಿ ನಿಲ್ಲಿಸಲು ಸೆಕ್ರೆಟರಿ ಜನರಲ್ ಆ್ಯಂಟನಿ ಗುಟಾರಸ್ ಕರೆ.