ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆಯರಿಗೆ ಸಮರ್ಪಿಸಲಾಗುವ ಉಕ್ಕಿನ ಶಿಲ್ಪವನ್ನು ಮುಂದಿನ ತಿಂಗಳು ಬ್ರಿಟನ್ನ ಎರಡನೇ ಅತಿದೊಡ್ಡ ನಗರ ಬರ್ಮಿಂಗ್ಹ್ಯಾಮ್ನಲ್ಲಿ ಸ್ಥಾಪಿಸಲಾಗುವುದು ಎಂದು ಬಿಬಿಸಿ ವರದಿ ಮಾಡಿದೆ. ಲ್ಯೂಕ್ ಪೆರ್ರಿ ವಿನ್ಯಾಸಗೊಳಿಸಿದ ಶಿಲ್ಪವನ್ನು ಅಕ್ಟೋಬರ್ನಲ್ಲಿ ವೆಸ್ಟ್ ಮಿಡ್ಲ್ಯಾಂಡ್ಸ್ನ ಸ್ಮೆಥ್ವಿಕ್ ಪ್ರದೇಶದಲ್ಲಿ ಸ್ಥಾಪಿಸಲಾಗುವುದು.
ಗಮನಾರ್ಹವಾಗಿ, ಹಿಜಾಬ್ ವಸ್ತ್ರವು ಕೇಶರಾಶಿ, ಕುತ್ತಿಗೆ ಮತ್ತು ಕೆಲವೊಮ್ಮೆ ಮಹಿಳೆಯ ಭುಜಗಳನ್ನು ಮುಚ್ಚುವ ಶಿರಸ್ತ್ರಾಣವಾಗಿದೆ.
ಐದು ಮೀಟರ್ ಎತ್ತರ ಮತ್ತು ಸುಮಾರು ಒಂದು ಟನ್ ತೂಕವಿರುವ ಈ ಶಿಲ್ಪವು ವಿಶ್ವದಲ್ಲೇ ಮೊದಲನೆಯದು ಎಂದು ನಂಬಲಾಗಿದೆ. “ಹಿಜಾಬ್ನ ಶಕ್ತಿ” ಎಂದು ಕರೆಯಲ್ಪಡುವ ಈ ಕಲಾಕೃತಿಯು, ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸುವುದನ್ನು ಚಿತ್ರಿಸುತ್ತದೆ, ಅದರ ತಳದಲ್ಲಿ “ಅವರು ಧರಿಸಲು ಆಯ್ಕೆಮಾಡಿದ ಯಾವುದನ್ನಾದರೂ ಪ್ರೀತಿಸುವುದು ಮತ್ತು ಗೌರವಿಸುವುದು ಮಹಿಳೆಯ ಹಕ್ಕು” ಎಂಬ ಪದಗಳನ್ನು ಅದರ ತಳದಲ್ಲಿ ಕೆತ್ತಲಾಗಿದೆ.
ಶಿಲ್ಪದ ಬಗ್ಗೆ ಮಾತನಾಡುತ್ತಾ, ಶ್ರೀ ಪೆರ್ರಿ ಹೇಳಿದರು, “ಹಿಜಾಬ್ನ ಶಕ್ತಿ” ಎಂಬುದು ಇಸ್ಲಾಮಿಕ್ ನಂಬಿಕೆಯ ಹಿಜಾಬ್ಗಳನ್ನು ಧರಿಸುವ ಮಹಿಳೆಯರನ್ನು ಪ್ರತಿನಿಧಿಸುವ ಒಂದು ಸಂಕೇತವಾಗಿದೆ, ಮತ್ತು ಇದು ನಿಜವಾಗಿಯೂ ಇಲ್ಲಿದೆ ,ಏಕೆಂದರೆ ಇದು ನಮ್ಮ ಸಮುದಾಯದ ನ್ಯೂನ ಪಕ್ಷೀಯರನ್ನು ಪ್ರತಿನಿಧಿಸುವ ಒಂದು ಭಾಗವಾಗಿದೆ, ಅದು ಪ್ರಮುಖವಾದ ಒಂದಾಗಿದೆ.
ಅವರು ಗೋಚರಿಸುವಂತಾಗಬೇಕಿರುವುದು ತುಂಬಾ ಮುಖ್ಯವಾಗಿದೆ, ಆದ್ದರಿಂದ ಅವರು ಪೋಶಾಕುಗಳೊಂದಿಗೆ ಬಾಹ್ಯವಾಗಿ ಸಮುದಾಯದೊಂದಿಗೆ ಕೆಲಸ ಮಾಡುವುದು ನಿಜವಾಗಿಯೂ ಉತ್ತೇಜನಕಾರಿಯಾಗಿದೆ, ಏಕೆಂದರೆ ಇದುವರೆಗೂ ಇಂತಹ ಪೋಶಾಕು, ಹೇಗೆ ವೀಕ್ಷಿಸಲ್ಪಡುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ.
ಕಲಾಕೃತಿಯ ಸ್ಥಳ ಸ್ಮೆಥ್ವಿಕ್ ಆಗಿರುತ್ತದೆ, “ಇಸ್ಲಾಮಿಕ್ ನಂಬಿಕೆಯಿಂದ ಬಂದ ಸಮುದಾಯದ ಒಂದು ದೊಡ್ಡ ಭಾಗವಾಗಿದೆ.” ಎಂದು ಅವರು ಹೇಳಿದರು.
‘ಇದು ಜನರು ತುಂಬಾ ಬಲವಾಗಿ ನಂಬಿಕೊಂಡು, ಗುರುತಿಸಿಕೊಳ್ಳುವ, ಅವರು ಸಂತೋಷದಿಂದ ಮತ್ತು ಆರಾಮದಾಯಕವಾಗಿರುವ ಒಂದು ಪ್ರಕ್ರಿಯೆ ಆಗಿದೆ. ಇದು ಸೀಮಿತವಾಗಿ ಮಿತಿಗೊಳಿಸುವ ವಿಷಯವಲ್ಲ, ವಿಶೇಷವಾಗಿ, ಸಾರ್ವಜನಿಕ ಕಲೆಯಲ್ಲಿ, ವೀರೋಚಿತವಾಗಿ ನಿರೂಪಿಸಬೇಕಿದೆ, ಆದ್ದರಿಂದ ಇದು ಮಿತವಾದ ಜನರು ಆಚರಿಸಿಕೊಂಡು ಬರುವ ಪದ್ಧತಿಗೆ ಸಂಭಂದ ಪಟ್ಟ ಸಂಗತಿಯಾಗಿದೆ,” ಎಂದು ಅವರು ಹೇಳಿದರು.
ಆಗಿದ್ದರೂ, ಹೊಸ ಶಿಲ್ಪವು “ವಿವಾದಾತ್ಮಕ” ಆಗಿರಬಹುದು ಎಂದು ಅವರು ಒಪ್ಪಿಕೊಂಡರು, ಆದರೆ ಯುನೈಟೆಡ್ ಕಿಂಗ್ಡಮ್ ನಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ಪ್ರತಿನಿಧಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ಹಿಂದೆ, ಶ್ರೀ ಪೆರ್ರಿ ಅವರು ಮೇ ತಿಂಗಳಲ್ಲಿ ಇಲ್ಲಿಗೆ ಹತ್ತಿರದ ವಿನ್ಸನ್ ಗ್ರೀನ್ನಲ್ಲಿ ಸ್ಥಾಪಿಸಲಾದ ಕೆನನ್ ಬ್ರೌನ್ ಜೊತೆಗೆ ಕಪ್ಪು ಬ್ರಿಟಿಷ್ ಇತಿಹಾಸ ಮತ್ತು ಬ್ರಿಟಿಷ್ ಇತಿಹಾಸ ಶಿಲ್ಪವನ್ನು ವಿನ್ಯಾಸಗೊಳಿಸಿದ್ದಾರ( ಕೃಪೆ: ಎನ್.ಡಿ.ಟಿ.ವಿ.ಕಾಮ್)
ಇನ್ನಷ್ಟು ವರದಿಗಳು
ಮಾಸ್ಕೋ: ಪುಟಿನ್ ರನ್ನು ಬಿಗಿದಪ್ಪಿದ ಮೋದಿ, ಉಭಯ ದೇಶಗಳ ಸಂಬಂಧ ವೃದ್ಧಿ ಮಾತುಕತೆಗೆ ಚಾಲನೆ.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ನ್ನು ಉತ್ತೇಜಿಸಲು ಬದ್ಧವಾಗಿದೆ: ಜಿ7 ಶೃಂಗಸಭೆ.
ಕಾಪ್ಟರ್ ಸಂಪರ್ಕಿಸಲ್ಪಟ್ಟಿತ್ತು…”: ಅಧ್ಯಕ್ಷ ರೈಸಿ ಸಾವಿನ ಕುರಿತು ಇರಾನ್ ತನಿಖಾ ವರದಿ.