ನವ ದೆಹಲಿ: ಸುಮಾರು ನೂರರಷ್ಟು ಪ್ರತಿಭಟನಾಕಾರರ ಪೈಕಿ ಹಲವರು ಯಹೂದಿ ಸಮುದಾಯದವರು, ಇಂದು ಅಮೆರಿಕ ಕಾಂಗ್ರೆಸ್ನಲ್ಲಿ ಗಾಝಾ ದಲ್ಲಿನ ಇಸ್ರೇಲ್ನ ಆಕ್ರಮಣದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಬಟಿಸಿದರು ಮತ್ತು ಜೋ ಬೈಡೆನ್ ಆಡಳಿತವು ಕದನ ವಿರಾಮಕ್ಕೆ ಒತ್ತಾಯಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಕಪ್ಪು ವಸ್ತ್ರ ಅಂಗಿಗಳನು ಧರಿಸಿದ್ದು, “ಯಹೂದಿಗಳು ಈಗ ಕದನ ವಿರಾಮವನ್ನು ಅಪೇಕ್ಷಿಸುತ್ತಾರೆ” ಮತ್ತು “ನಮ್ಮ ಹೆಸರಿನಲ್ಲಿ ಸಲ್ಲ” ಎಂಬ ಸಂದೇಶಗಳನ್ನು ಇರುವ ಭಿತ್ತಿ ಪತ್ರಗಳನ್ನು ಹೊಂದಿದ್ದರು. ಅವರಲ್ಲಿ ಹಲವರು ಕಿಪ್ಪಾ, ಯಹೂದಿ ಸಾಂಪ್ರದಾಯಿಕ ಟೊಪ್ಪಿಗೆ ಧರಿಸಿದ್ದರು.

ಪ್ರತಿಭಟನಾಕಾರರು ಅಮೆರಿಕ ಕಾಂಗ್ರೆಸ್ನ ಕ್ಯಾನನ್ ರೋಟುಂಡಾ ಕಟ್ಟಡವನ್ನು ಮುತ್ತಿಗೆ ಹಾಕಿ ಮತ್ತು ಗಾನ ಮತ್ತು ಬಿತ್ತಿ ಪತ್ರಗಳನ್ನು ಬೀಸಲು ಪ್ರಾರಂಭಿಸಿದರು. ಪ್ರತಿಭಟನಾ ಕಾರರ ಪೈಕಿ ಹಲವರನ್ನು ಬಂಧಿಸಲಾಯಿತು.
“ಪ್ರದರ್ಶನವನ್ನು ನಿಲ್ಲಿಸುವಂತೆ ನಾವು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಅವರು ಅನುಸರಿಸದಿದ್ದಾಗ ನಾವು ಅವರನ್ನು ಬಂಧಿಸಲು ಪ್ರಾರಂಭಿಸಿದ್ದೇವೆ” ಎಂದು ಅಮೆರಿಕ ರಾಜಧಾನಿ ಪೋಲೀಸ್ರ ಅಧಿಕೃತ ಹ್ಯಾಂಡಲ್ ಎಕ್ಸ್ ನಲ್ಲಿ ಮಾಹಿತಿ ಪೋಸ್ಟ್ ಮಾಡಲಾಗಿದೆ.
ಯಹೂದಿ ಝಿಯೋನಿಸ್ಟ್ ವಿರೋಧಿ ಸಂಘಟನೆಯಾದ ಯಹೂದಿ ವಾಯ್ಸ್ ಫಾರ್ ಪೀಸ್ ಈ ಪ್ರತಿಭಟನೆಯನ್ನು ಆಯೋಜಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಫಿಲಡೆಲ್ಫಿಯಾದ, ರಬ್ಬಿ ಎಪ್ಪತ್ತೊಂದು ವರ್ಷದ, ಲಿಂಡಾ ಹೋಲ್ಟ್ಜ್ಮನ್ ಅವರು ಬೇಡಿಕೆಯಿಟ್ಟು ತಕ್ಷಣ ಕದನ ವಿರಾಮವನ್ನು ಒತ್ತಾಯಿಸಿದರು ಮತ್ತು “ನಿಮ್ಮ ಕಣ್ಣುಗಳನ್ನು ತೆರೆಯಿರಿ” ಎಂದು ಬೈಡೆನ್ ಅವರನ್ನು ಒತ್ತಾಯಿಸಿದರು ಎಂದು ಎಎಫ್ಪಿ ವರದಿ ಮಾಡಿದೆ.
“ಬಿಡೆನ್ ನಿಜವಾಗಿಯೂ ಇದೀಗ ಇಸ್ರೇಲ್ಗೆ ಒತ್ತಡ ಹೇರುವ ಶಕ್ತಿಯನ್ನು ಹೊಂದಿದ್ದಾನೆ ಮತ್ತು ಮುಗ್ಧ ಜೀವಗಳನ್ನು ಉಳಿಸಲು ಅವನು ಆ ಶಕ್ತಿಯನ್ನು ಬಳಸಬೇಕಾಗಿದೆ” ಎಂದು ವರ್ಮೊಂಟ್ನಿಂದ ಬಂದ 32 ವರ್ಷದ ಹನ್ನಾ ಲಾರೆನ್ಸ್ ಹೇಳಿದರು.
“ಗಾಜಾದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ. ಗಾಝಾದಲ್ಲಿನ ವಿನಾಶವನ್ನು ನೋಡಿ,” ಹೋಲ್ಟ್ಜ್ಮನ್ ಟೋಲ್ಫ್ ಎ ಪಿ ಎಫ್ ಗೆ ತಿಳಿಸುತ್ತಾ “ನೀವು ನಿಮ್ಮೊಂದಿಗೆ ಬದುಕಲು ಬಯಸಿದರೆ, ನೀವು ಎದ್ದುನಿಂತು ನರಮೇಧವನ್ನು ಕೊನೆಗೊಳಿಸಬೇಕು. ನಾನು ಇದೀಗ ಕದನ ವಿರಾಮಕ್ಕೆ ಒತ್ತಾಯಿಸುತ್ತೇನೆ.” ಎಂದು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಕೈಕೋಳ ಹಾಕಿ ಪ್ರತಿಭಟನಾಕಾರರನ್ನು ಪೊಲೀಸರು ಕರೆದೊಯ್ದು ಬಿತ್ತಿಪತ್ರ ಗಾಳನ್ನು ತೆರವು ಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿವೆ. ಕದನ ವಿರಾಮಕ್ಕೆ ಕರೆ ನೀಡಿದ ಪ್ರತಿಭಟನಾಕಾರರು ಧರಣಿ ನಡೆಸುತ್ತಿರುವಾಗ ಒಗ್ಗಟ್ಟಿನ ಸಂಕೇತವಾಗಿ ರಿಪಬ್ಲಿಕನ್ ಕಾಂಗ್ರೆಸ್ನ ಬ್ರ್ಯಾಂಡನ್ ವಿಲಿಯಮ್ಸ್ ಇಸ್ರೇಲಿ ಧ್ವಜವನ್ನು ಬೀಸುತ್ತಿರುವುದರ ದೃಶ್ಯಗಳು ತೋರಿಸಿವೆ.

ಇಸ್ರೇಲ್ ಮೇಲೆ ಹಮಾಸ್ ನ ಅಕ್ಟೋಬರ್ 7 ರ ದಾಳಿಗಳು ಮತ್ತು ಕ್ರೂರ ಪ್ರತಿದಾಳಿಯು ಇಲ್ಲಿಯವರೆಗೆ ಸುಮಾರು 4,800 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಆಸ್ಪತ್ರೆಯೊಂದರ ಮೇಲೆ ನಡೆದ ದಾಳಿಯು ನೂರಾರು ಜೀವಗಳನ್ನು ಬಲಿ ಪಡೆದ ನಂತರ ಗಾಜಾ ಪಟ್ಟಿಯಲ್ಲಿರುವ ಹಗೆತನವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸುವ ಜಾಗತಿಕ ಪ್ರತಿರೋಧ ಜೋರಾಗಿದೆ. ಇಸ್ರೇಲ್ ಪಡೆಗಳು ಆಸ್ಪತ್ರೆಯ ಮೇಲೆ ದಾಳಿ ನಡೆಸಿವೆ ಎಂದು ಹಮಾಸ್ ಆರೋಪಿಸಿದರೆ, ಟೆಲ್ ಅವೀವ್ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ ಮತ್ತು ಹಮಾಸ್ ಮಿತ್ರ ಇಸ್ಲಾಮಿಕ್ ಜಿಹಾದ್ ನಿಂದ ರಾಕೆಟ್ ತಪ್ಪಾಗಿ ಉಡಾವಣೆಗೊಂಡಿದ್ದು ದುರಂತಕ್ಕೆ ಕಾರಣವಾಯಿತು ಎಂದು ಇಸ್ರೇಲ್ ಸೇನೆ ಹೇಳಿದೆ.
ಅಮೆರಿಕ ಅಧ್ಯಕ್ಷ ಬೈಡೆನ್ ನಿನ್ನೆ ಟೆಲ್ ಅವೀವ್ ತಲುಪಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದಾರೆ.
ಇನ್ನಷ್ಟು ವರದಿಗಳು
ನ್ಯೂಜಿಲೆಂಡ್: ಕ್ರೈಸ್ತ ಚರ್ಚ್, ಅಲ್ನೂರ್ ಮಸೀದಿ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಅಲ್ – ಇಸ್ಸಾ.
ಅಮೆರಿಕ ಜೊತೆಗಿನ ದ್ವಿತೀಯ ಮಾತುಕತೆಗೆ ಸಿದ್ಧವಾಗದ ಇರಾನ್, ಪಾಕಿಸ್ತಾನದ ಶಾಂತಿ ಮಾತುಕತೆ ಬಗ್ಗೆ ಅನುಮಾನ ವ್ಯಕ್ತ.
ವಿಶ್ವಸಂಸ್ಥೆ: ಇಸ್ರೇಲ್ – ಅಮೆರಿಕಾಕ್ಕೆ ಯುದ್ಧ ಅಂತ್ಯಗೊಳಿಸಲು, ಇರಾನ್ ಧಾಳಿ ನಿಲ್ಲಿಸಲು ಸೆಕ್ರೆಟರಿ ಜನರಲ್ ಆ್ಯಂಟನಿ ಗುಟಾರಸ್ ಕರೆ.