July 27, 2024

Vokkuta News

kannada news portal

ದ.ಕ.ಕ್ಷೇತ್ರ,ಕಾಂಗ್ರೆಸ್ ಗೆಲುವು ಖಚಿತ: ವಕ್ತಾರ ಮೌಶೀರ್ ಅಹಮದ್ ಸಾಮನಿಗ.

ಮಂಗಳೂರು; ನರೇಂದ್ರ ಮೋದಿ ದುರಾಡಳಿತದಿಂದ ಬೇಸತ್ತಿರುವ ಜಿಲ್ಲೆಯ ಮತದಾರರು ಈ ಬಾರಿ ಪ್ರಜ್ಞಾವಂತರಾಗಿದ್ದು,ಮೂರು ದಶಕಗಳ ನಂತರ ಜಿಲ್ಲೆಯ ಜನತೆ,ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲಿದ್ದಾರೆ. ದ.ಕ.ಲೋಕಸಭಾ ಅಭ್ಯರ್ಥಿಗೆ ಈ ಬಾರಿ ಜಿಲ್ಲೆಯ ಮತ ನೀಡುವ ಮೂಲಕ ಓರ್ವ ಸಮರ್ಥ ಸಂಸದರನ್ನು ಲೋಕಸಭೆಗೆ ಕಳುಹಿಸಲಿದ್ದು ದ.ಕ.ಜಿಲ್ಲೆ ಭಾವನಾತ್ಮಕ ರಾಜಕೀಯ ದಿಂದ ಅಭಿವೃದ್ದಿ ಉದ್ದೇಶಿತ ರಾಜಕೀಯಕ್ಕೆ ಸ್ಥಿತ್ಯಂತರ ಗೊಳ್ಳಲಿದೆ,ರಾಜ್ಯದ ಜನತೆ ಕಾಂಗ್ರೆಸ್ ನೇತೃತ್ವದ ಸರಕಾರ ಈ ಹಿಂದೆ ನೀಡಿದ ಪಂಚ ಗ್ಯಾರಂಟಿ ಯನ್ನು ನೆನಪಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮೌಶೀರ್ ಅಹಮದ್ ಸಾಮನಿಗ ಹೇಳಿಕೆ ನೀಡಿದ್ದಾರೆ.