ಮಂಗಳೂರು: ಕಾಂಗ್ರೆಸ್ ಕೆಪಿಸಿಸಿ ಕಾರ್ಯದರ್ಶಿ, ಎಐಸಿಸಿ ಸದಸ್ಯರಾದ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಶ್ರೀ ಐವನ್ ಡಿಸೋಜ ಅವರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯತ್ವ ಚುನಾವಣೆಗೆ ಅಭ್ಯರ್ಥಿತನ ಲಭ್ಯವಾಗಿದ್ದು, ಜಿಲ್ಲೆಗೆ ಲಭಿಸಿದ ಕೊಡುಗೆಯಾಗಿದೆ. ಕಳೆದ ಆರು ವರ್ಷದ ಹಿಂದಿನ ಅವಧಿಯಲ್ಲಿ ಐವನ್ ಡಿಸೋಜಾ ರವರು ವಿಧಾನ ಪರಿಷತ್ ಸದಸ್ಯರಾದ ಸಂಧರ್ಭದಲ್ಲಿ ಅವರು ಉತ್ತಮ ಅಭಿವೃದ್ಧಿ ಕಾರ್ಯ ವನ್ನು ಕೈಗೊಂಡಿದ್ದರು ಮತ್ತು ವೈದ್ಯಕೀಯ ಮತ್ತು ಆರೋಗ್ಯ ನೆರವು ಕಾರ್ಯಕ್ರಮಕ್ಕೆ ಪ್ರತ್ಯೇಕ ಪೂರಕ ಯೋಜನೆಗಳ ನೆರವು ಕಾರ್ಯಕ್ರಮ ಮತ್ತು ಅನುದಾನ ರೂಪಿಸಿದ್ದರು. ಐವನ್ ಡಿಸೋಜಾ ರಿಗೆ ಲಭ್ಯವಾದ ಅಭ್ಯರ್ಥಿತನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಹಾಗು ಮಾಜಿ ಮೇಯರ್ ಕೆ.ಅಶ್ರಫ್ ಅಭಿನಂದನೆ ಸಲ್ಲಿಸಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಕರ್ನಾಟಕದಲ್ಲಿ ಎಳೆ ಶಿಶುವಿನಿಂದ 18 ವರ್ಷ ವಯಸ್ಸಿನ 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಪತ್ತೆ
ಸಮಾನಾಂತರ ವಕೀಲರ ಸಂಘದ ಪ್ರಸ್ತಾವಿತ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ,ಕ.ಹೈಕೋರ್ಟ್ ಬೆಂಗಳೂರಿನ ವಕೀಲರ ಸಂಘ (ಎಎಬಿ)ಕ್ಕೆ ಮಧ್ಯಂತರ ಆದೇಶ.
ಧರ್ಮಸ್ಥಳ ಪ್ರಕರಣ, ಬೃಹತ್ ತಿರುವು, ಸುಳ್ಳು ಸಾಕ್ಷ್ಯದಾರ ಮುಸುಕುಧಾರಿ ವ್ಯಕ್ತಿ ಬಂಧನ.