July 27, 2024

Vokkuta News

kannada news portal

ಸಾಮಾಜಿಕ ಹೋರಾಟಗಾರರನ್ನು ಬೇಷರತ್ ಬಿಡುಗಡೆಗೊಳಿಸಬೇಕು: ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯ

ಜಿಲ್ಲಾ ಮಟ್ಟದ ನ್ಯಾಯಧಿಕರಣದ ಅಥವಾ , ಐಪಿಸಿ ಕಲಂನಡಿಯಲ್ಲಿ ಬರುವ ಘಟನೆಗಳಿಗೆ ಎನ್.ಐ. ಎ ಕೇಂದ್ರೀಯ ತನಿಖಾ ತಂಡವನ್ನು ದುರುಪಯೋಗಪಡಿಸುತ್ತಿರುವ ಕೇಂದ್ರ ಸರ್ಕಾರದ ಈ ನಡೆಯು ದ್ವೇಷಪೂರಿತ ಸೇಡಿನ ರಾಜಕೀಯವಾಗಿದೆ.

ಬೆಂಗಳೂರು: ಕರ್ನಾಟಕ ಹಾಗೂ ದೇಶದ ವಿವಿಧತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಚೇರಿ ಮತ್ತು ನಾಯಕರ ಮನೆಗಳಿಗೆ ಎನ್. ಐ. ಎ ಕೇಂದ್ರೀಯ ತನಿಖಾ ತಂಡ ನಡೆಸಿದ ದಾಳಿ ಮತ್ತು ಬಂಧನವನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ.

ಜಿಲ್ಲಾ ಮಟ್ಟದ ನ್ಯಾಯಧಿಕರಣದ ಅಥವಾ , ಐಪಿಸಿ ಕಲಂನಡಿಯಲ್ಲಿ ಬರುವ ಘಟನೆಗಳಿಗೆ ಎನ್.ಐ. ಎ ಕೇಂದ್ರೀಯ ತನಿಖಾ ತಂಡವನ್ನು ದುರುಪಯೋಗಪಡಿಸುತ್ತಿರುವ ಕೇಂದ್ರ ಸರ್ಕಾರದ ಈ ನಡೆಯು ದ್ವೇಷಪೂರಿತ ಸೇಡಿನ ರಾಜಕೀಯವಾಗಿದೆ.

ತನಿಖಾ ಏಜೆನ್ಸಿಗಳು ಕಾನೂನಾತ್ಮಕವಾಗಿ ನಡೆದುಕೊಳ್ಳದೆ ಸಿನಿಮೀಯ ರೀತಿಯಲ್ಲಿ ದಾಳಿಯನ್ನು ನಡೆಸಿದೆ. ವಾರೆಂಟ್ ಇಲ್ಲದೆ, ಮಹಿಳಾ ಪೊಲೀಸರ ಅನುಪಸ್ಥಿತಿಯಲ್ಲಿ, ಬಾಗಿಲುಗಳನ್ನು ಮುರಿದು, ಹೆದರಿಸಿ ಯಾವುದೇ ಕಳ್ಳರು ದರೋಡೆಕೋರರಿಗಿಂತ ನಾವು ಕಮ್ಮಿ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಸರಕಾರವು ಮಾಧ್ಯಮಗಳಲ್ಲಿ ಇಂತಹ ಒಂದು ದೃಶ್ಯಾವಳಿಯನ್ನು ಸೃಷ್ಟಿಸಿ ತನಿಖೆಗೆ ಸಹಕರಿಸದವರು ಎಂಬಂತೆ ಬಿಂಬಿಸಲು ಹೊರಟಿದೆ.

ಮಹಿಳೆಯರದ್ದು ಒಳಗೊಂಡ ನಗ-ನಗದು ಕಳ್ಳತನ ವಾಗಿರುವುದು ಕೂಡ ವಗರದಿಯಾಗಿದೆ. ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಗಳನ್ನು ಹೊತ್ತೊಯ್ದ ಕಾರಣ ಶಿಕ್ಷಣಕ್ಕೆ ತಡೆಯಾಗಿದೆ. ಹತ್ತಾರು ಪೊಲೀಸರೊಂದಿಗೆ ತಡರಾತ್ರಿ ಏಕಾಏಕಿ ದಾಳಿ ನಡೆಸಿ, ಬೆದರಿಸಿ , ಸಾಮಗ್ರಿಗಳನ್ನು ಚದುರಿಸಿ ನಡೆಸುವ ತನಿಖೆ ಯಿಂದಾಗಿ ಮಕ್ಕಳು ಮಹಿಳೆಯರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.

ಎನ್.ಐ. ಎ ಕೇಂದ್ರೀಯ ತನಿಖಾ ತಂಡದ ಅಕ್ರಮ ಬಂಧನವು ಸಂಘಪರಿವಾರ ಪ್ರೇರಿತವಾಗಿದ್ದು, ಸಾಮಾಜಿಕ ಹೋರಾಟಗಾರಾದ ಪಿಎಫ್ಐ ನಾಯಕರನ್ನು ಬೇಶರತ್ ತಕ್ಷಣ ಬಿಡುಗಡೆಗೊಳಿಗೆಸಬೇಕು ಹಾಗೂ ಇಂತಹ ದ್ವೇಷಪೂರಿತ ಅಕ್ರಮ ಎನ್. ಐ. ಎ ಯ ತನಿಖೆ ತಕ್ಷಣ ನಿಲ್ಲಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.