ನವ ದೆಹಲಿ: ಬಹುರಾಷ್ಟ್ರೀಯ ವಿಶಾಲ ಮೈತ್ರಿಯು ಯುರೋಪ್, ಮಧ್ಯಪ್ರಾಚ್ಯ ಮತ್ತು ಭಾರತವನ್ನು ಸಂಪರ್ಕಿಸುವ ಆಧುನಿಕ ಯುಗದ ಮಾದರಿ ಮಾರ್ಗವನ್ನು ರಚಿಸಲು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಶನಿವಾರ ಅನಾವರಣಗೊಳಿಸಿದೆ ಮತ್ತು ಸಂಭಾವ್ಯ ವ್ಯಾಪಕವಾದ ಭೌಗೋಳಿಕ ರಾಜಕೀಯ ಪರಿಣಾಮಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಲು ಇದು ಸಹಕಾರಿಯಾಗುತ್ತದೆ ಎಂದು ದೆಹಲಿಯಲ್ಲಿ ಇಂದಿನಿಂದ ನಡೆದ ಜಿ 20 ಶೃಂಗ ಸಭೆ ತೀರ್ಮಾನಿಸಿತು.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಸೌದಿ ಅರೇಬಿಯಾ, ಯುರೋಪಿಯನ್ ಯೂನಿಯನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇತರರು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಮೂಲಭೂತ ಸೌಕರ್ಯಗಳಾದ ರೈಲ್ವೆ, ಬಂದರುಗಳು, ವಿದ್ಯುತ್ ಮತ್ತು ಡೇಟಾ ನೆಟ್ವರ್ಕ್ಗಳು ಮತ್ತು ಹೈಡ್ರೋಜನ್ ಪೈಪ್ಲೈನ್ಗಳನ್ನು ಸಂಪರ್ಕಿಸುವ ಉಪಕ್ರಮದ ಯೋಜನೆಯ ಪರಸ್ಪರ ಸಹಕಾರದ ಉಪಕ್ರಮವನ್ನು ಪ್ರಾರಂಭಿಸಿದರು.
ಯೋಜನೆಯು ಭಾರೀ ವ್ಯಾಪಾರ-ಕೇಂದ್ರಿತವಾಗಿದ್ದರೂ ವ್ಯಾಪಕವಾದ ಪರಿಣಾಮಗಳನ್ನು ಬೀರಬಹುದು ಎಂದು ಭಾವಿಸಿತು. ದೀರ್ಘಕಾಲದ ವೈರಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಪರ್ಕಗಳನ್ನು ಅಭಿವೃದ್ಧಿಪಡಿಸುವುದು. 1.4 ಶತಕೋಟಿ ಜನಸಂಖ್ಯೆಯ ಭಾರತದ ವಿಶಾಲ ಮಾರುಕಟ್ಟೆಯನ್ನು ಪಶ್ಚಿಮದ ದೇಶಗಳೊಂದಿಗೆ ಸಂಯೋಜಿಸಲು ಇದು ಸಹಾಯ ಮಾಡುತ್ತದೆ ಎಂದು ಜಿ 20 ಭಾಗೀದಾರರು ಅಭಿಪ್ರಾಯ ಪಟ್ಟರು. ಈ ಉಪಕ್ರಮ ಅದ್ದೂರಿ ಚೀನೀ ಮೂಲಸೌಕರ್ಯ ವೆಚ್ಚಗಳಿಗೆ ಪ್ರತಿಸಮತೋಲನವನ್ನು ನೀಡುತ್ತದೆ, ಮಧ್ಯಪ್ರಾಚ್ಯ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿತು.
ವ್ಯಕ್ತಿ,ಮತೀಯ ಸಂಕೇತ,ಗ್ರಂಥಗಳ ಅಪವಿತ್ರ ಗೊಳಿಸುವಿಕೆಯನ್ನು ಧಾರ್ಮಿಕ ದೂಷಣೆ ಎಂದು ಪರಿಗಣಿಸಿ ಅಂತಹ ನಡೆಯನ್ನು ಸಾಮೂಹಿಕವಾಗಿ ಜಿ 20 ಶೃಂಗ ಸಭೆ ಸಂಯುಕ್ತವಾಗಿ ಖಂಡಿಸಿದೆ.ಮತೀಯ ಸಹಿಷ್ಣತೆ ರಕ್ಷಣೆ,ದ್ವೇಷ ಮತ್ತು ಹಿಂಸೆಗಳನ್ನು ವಿರೋಧಿಸುವುದರ ನಿರ್ಣಯವನ್ನು ಅಂಗೀಕರಿಸಿತು.
ಭಾರತ ಜಿ.20 ಶೃಂಗ ಸಭೆಯ ಆಥಿತ್ಯ ವಹಿಸಿದ್ದು ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ಜಂಟಿ ಮೇಲುಸ್ತುವಾರಿಯಲ್ಲಿ ಶೃಂಗ ಸಭೆ ನಡೆಯುತ್ತಿದೆ.
ಇನ್ನಷ್ಟು ವರದಿಗಳು
ನ್ಯೂಜಿಲೆಂಡ್: ಕ್ರೈಸ್ತ ಚರ್ಚ್, ಅಲ್ನೂರ್ ಮಸೀದಿ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಶೇಖ್ ಮೊಹಮ್ಮದ್ ಅಲ್ – ಇಸ್ಸಾ.
ಅಮೆರಿಕ ಜೊತೆಗಿನ ದ್ವಿತೀಯ ಮಾತುಕತೆಗೆ ಸಿದ್ಧವಾಗದ ಇರಾನ್, ಪಾಕಿಸ್ತಾನದ ಶಾಂತಿ ಮಾತುಕತೆ ಬಗ್ಗೆ ಅನುಮಾನ ವ್ಯಕ್ತ.
ವಿಶ್ವಸಂಸ್ಥೆ: ಇಸ್ರೇಲ್ – ಅಮೆರಿಕಾಕ್ಕೆ ಯುದ್ಧ ಅಂತ್ಯಗೊಳಿಸಲು, ಇರಾನ್ ಧಾಳಿ ನಿಲ್ಲಿಸಲು ಸೆಕ್ರೆಟರಿ ಜನರಲ್ ಆ್ಯಂಟನಿ ಗುಟಾರಸ್ ಕರೆ.