ಕುಂದಾಪುರ: ಇತ್ತೀಚೆಗೆ ಬಹುಕೋಟಿ ವಂಚನೆ ಆರೋಪಿ ಮತ್ತು ದುರ್ಗಾ ವಾಹಿನಿ ಸಂಘಟನೆಯ ಮುಖ್ಯಸ್ಥೆ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಪ್ರದರ್ಶಿಸಿ ,ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿ ಪಡೆದ ನಂತರ ತನಿಖೆಯ ವೇಳೆ ಅಸ್ವಸ್ಥ ಗೊಂಡ ನಂತರ ಚಿಕಿತ್ಸೆಗಾಗಿ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಚೈತ್ರಳ ವಿರುದ್ಧ ಗೋಪಾಲ್ ಪೂಜಾರಿ ಎಂಬವರು ತನಗೆ ಚೈತ್ರಾ ಮತ್ತು ಇತರರು ಬಿಜೆಪಿ ಪಕ್ಷದ ವತಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿತನ ನೀಡಲು ಪಕ್ಷ ವರಿಷ್ಠರಿಗೆ ಶಿಫಾರಸು ಮಾಡುತ್ತೇನೆಂದು ಭರವಸೆ ನೀಡಿ ಅಘಾದ ಮೊತ್ತದ ನಗದು ಹಣ ಪಡೆದು ವಂಚಿಸಲಾಗಿದೆ ಎಂದು ಪ್ರಕರಣದ ದೂರಿನಲ್ಲಿ ಆರೋಪಿಸಲಾಗಿದೆ ಮತ್ತು ಇದು ಬಹುಕೋಟಿ ಮೊತ್ತದ ಅವ್ಯವಹಾರ ಎಂದು ಪ್ರಚಾರವಾಗಿತ್ತು.
ಪ್ರಕರಣದಲ್ಲಿ ಹಲವರು ಬಂಧನಕ್ಕೆ ಒಳಗಾಗಿದ್ದು, ಒರ್ವ ಧಾರ್ಮಿಕ ವ್ಯಕ್ತಿ ಕೂಡಾ ಶಾಮೀಲು ಆಗಿದ್ದು,ಪ್ರಮುಖ ನಾಯಕರ ಪಾತ್ರವೂ ಇದೆ ಎಂದು ಮಾದ್ಯಮದ ಮುಂದೆ ಚೈತ್ರಾ ಹೇಳಿಕೆ ನೀಡಿದ್ದರು.
ಇನ್ನಷ್ಟು ವರದಿಗಳು
ಗೋರಿ ಪಾಳ್ಯ ‘ ಪಾಕಿಸ್ತಾನ ‘ ವಿವಾದಾತ್ಮಕ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ಕರ್ನಾಟಕ ನ್ಯಾಯಮೂರ್ತಿ ವಿ. ಶ್ರೀಶಾನಂದ.
‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಿದ ಕರ್ನಾಟಕ, 2,500 ಕಿ.ಮೀ ಮಾನವ ಸರಪಳಿ ರಚನೆ
ಫನ್ ಪಾರ್ಟಿಯಿಂದ ಹಿಂತಿರುಗುತ್ತಿದ್ದ ಬೆಂಗಳೂರಿನ ವಿದ್ಯಾರ್ಥಿನಿಯನ್ನು ಲಿಫ್ಟ್ ನೀಡಿದ ಬೈಕ್ ಸವಾರನಿಂದ ಅತ್ಯಾಚಾರ ಕೃತ್ಯ.