ಕುಂದಾಪುರ: ಇತ್ತೀಚೆಗೆ ಬಹುಕೋಟಿ ವಂಚನೆ ಆರೋಪಿ ಮತ್ತು ದುರ್ಗಾ ವಾಹಿನಿ ಸಂಘಟನೆಯ ಮುಖ್ಯಸ್ಥೆ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಪ್ರದರ್ಶಿಸಿ ,ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿ ಪಡೆದ ನಂತರ ತನಿಖೆಯ ವೇಳೆ ಅಸ್ವಸ್ಥ ಗೊಂಡ ನಂತರ ಚಿಕಿತ್ಸೆಗಾಗಿ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಚೈತ್ರಳ ವಿರುದ್ಧ ಗೋಪಾಲ್ ಪೂಜಾರಿ ಎಂಬವರು ತನಗೆ ಚೈತ್ರಾ ಮತ್ತು ಇತರರು ಬಿಜೆಪಿ ಪಕ್ಷದ ವತಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿತನ ನೀಡಲು ಪಕ್ಷ ವರಿಷ್ಠರಿಗೆ ಶಿಫಾರಸು ಮಾಡುತ್ತೇನೆಂದು ಭರವಸೆ ನೀಡಿ ಅಘಾದ ಮೊತ್ತದ ನಗದು ಹಣ ಪಡೆದು ವಂಚಿಸಲಾಗಿದೆ ಎಂದು ಪ್ರಕರಣದ ದೂರಿನಲ್ಲಿ ಆರೋಪಿಸಲಾಗಿದೆ ಮತ್ತು ಇದು ಬಹುಕೋಟಿ ಮೊತ್ತದ ಅವ್ಯವಹಾರ ಎಂದು ಪ್ರಚಾರವಾಗಿತ್ತು.
ಪ್ರಕರಣದಲ್ಲಿ ಹಲವರು ಬಂಧನಕ್ಕೆ ಒಳಗಾಗಿದ್ದು, ಒರ್ವ ಧಾರ್ಮಿಕ ವ್ಯಕ್ತಿ ಕೂಡಾ ಶಾಮೀಲು ಆಗಿದ್ದು,ಪ್ರಮುಖ ನಾಯಕರ ಪಾತ್ರವೂ ಇದೆ ಎಂದು ಮಾದ್ಯಮದ ಮುಂದೆ ಚೈತ್ರಾ ಹೇಳಿಕೆ ನೀಡಿದ್ದರು.
ಇನ್ನಷ್ಟು ವರದಿಗಳು
ಕರ್ನಾಟಕ ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ: ನಿವೃತ್ತ ಐ.ಎ.ಎಸ್ ಅಧಿಕಾರಿ ಎಲ್.ಕೆ. ಅತೀಕ್ ಹೆಸರು ಮುಂಚೂಣಿಯಲ್ಲಿ.
ಬೆಂ.ಮುಸ್ಲಿಮ್ ಸಮಾವೇಶದ ಸಂದೇಶ ಸರ್ಕಾರಕ್ಕೆ ರವಾನೆ ಆಗಲಿದೆ : ಮುಸ್ಲಿಮ್ ವಾಯ್ಸ್ ಆನ್ಲೈನ್ ಸಂವಾದದಲ್ಲಿ ರಫಿಉದ್ದೀನ್ ಕುದ್ರೋಳಿ.
ಬೆಂಗಳೂರು, ಮೇ 16. ರಾಜ್ಯ ಮುಸ್ಲಿಮ್ ಸಮ್ಮೇಳನ, ಸರಕಾರದ ಭರವಸೆ, ಈಡೇರಿಕೆ, ನಿರ್ಲಕ್ಷ್ಯಗಳ ವರದಿ ಬಿಡುಗಡೆ.