January 20, 2025

Vokkuta News

kannada news portal

ಡಿ.20 ಪಿಯುಸಿಎಲ್,ಜಾಗತಿಕ ಮಾನವ ಹಕ್ಕು ದಿನಾಚರಣೆ: ಮಂ.ರೋಶನಿ ನಿಲಯದಲ್ಲಿ ಸಂವಾದ.

ಮಂಗಳೂರು: ಪಿಯುಸಿಎಲ್ ಸಂಘಟನೆಯ ವತಿಯಿಂದ ಅಂತರರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ ಸ್ಮರಣಾರ್ಥ ತಾರೀಕು 20 ನೇ ಡಿಸೆಂಬರ್ 2024 ರಂದು, ಮಂಗಳೂರಿನ ವೇಲೆನ್ಸಿಯಾ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಗೆ , ಪ್ರಸಕ್ತ ಭಾರತದಲ್ಲಿ ಮಾನವ ಹಕ್ಕು ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೇಲೇರಿಯಲ್ ರೊಡ್ರಿಗಸ್ ಅವರು ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರ ಅರ್ಥದಲ್ಲಿ ಮಾನವಹಕ್ಕು ಮತ್ತು ಮಣಿಪುರದಲ್ಲಿ ಮಾನವ ಹಕ್ಕು ಸಂರಕ್ಷಣೆಯ ಸವಾಲುಗಳು ವಿಷಯದಲ್ಲಿ ಡಾ.ದು. ಸರಸ್ವತಿ ಯವರು ವಿಷಯ ಮಂಡನೆ ಮಾಡಲಿದ್ದು, ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸೂಪಿಯ ರವರು ಪ್ರಸ್ತಾವನೆ ಮಾಡಲಿದ್ದಾರೆ. ಕರ್ನಾಟಕ ಪಿಯುಸಿಎಲ್ ಅಧ್ಯಕ್ಷರಾದ ಅರವಿಂದ್ ನರೈನ್ ರವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು , ಕಾರ್ಯದರ್ಶಿ ಶುಜಯತುಲ್ಲಾ ಸ್ವಾಗತಿಸಲಿದ್ದಾರೆ ಎಂದು ಪಿಯುಸಿಎಲ್ ಪ್ರಕಟಣೆ ತಿಳಿಸಿದೆ.