May 20, 2025

Vokkuta News

kannada news portal

ಮಂಗಳೂರು ವಕ್ಫ್ ಸಮಾವೇಶ, ಜನ ಜಮಾವಣೆ, ಬೃಹತ್ ಹಕ್ಕೊತ್ತಾಯಕ್ಕೆ ಕ್ಷಣ ಗಣನೆ

ಅಡ್ಯಾರ್: ಕರ್ನಾಟಕ ಉಲೇಮಾ ಕೊ ಆರ್ಡಿನೇಶನ್ ಕಮಿಟಿ ಆಯೋಜಿಸಿದ ಜಿಲ್ಲಾ ಮಟ್ಟದ, ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಇಂದು ಮಂಗಳೂರಿನ ಅಡ್ಯಾರ್ ಕಣ್ಣೂರಿನ ಷಾ ಮೈದಾನದಲ್ಲಿ ಜನ ಜಮಾವಣೆ ಸೇರಿಕೊಂಡಿದ್ದು, ಉಲೇಮಾ ಮತ್ತು ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯ ನಡೆಯುವ ಪ್ರತಿಭಟನಾ ಸಮಾವೇಶದಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯ ದುಷ್ಪರಿಣಾಮಗಳ ವಿರುದ್ಧ ಹಕ್ಕೊತ್ತಾಯ ನಿರ್ಣಯ ಅಂಗೀಕರಿಸಲಿದೆ.

ಉಭಯ ಜಿಲ್ಲೆಗಳ ಖಾಝಿಗಳು ಮತ್ತು ಉಲೇಮಾ ಗಳು ಈ ಪ್ರತಿಭಟನಾ ಸಮಾವೇಶ ಕುರಿತು ಘನ ಭಾಷಣ ಮಾಡಲಿದ್ದು, ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಸಮುದಾಯ ಒಕ್ಕೊರಲ ಬೇಡಿಕೆ ಸಲ್ಲಿಕೆ ಮತ್ತು ಬೃಹತ್ ಸಂದೇಶ ರವಾನಿಸಲಿದೆ.