May 19, 2025

Vokkuta News

kannada news portal

ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.

ಮಂಗಳೂರು: ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮಂಗಳೂರಿನಲ್ಲಿ  ಯುನಿವರ್ಸಲ್ ವೆಲ್ಫೇರ್ ಫಾರಂ ಕರ್ನಾಟಕ ಮತ್ತು ಎಮ್.ಜೆ.ಎಫ್ ಸಂಘಟನೆಯ ಜಂಟಿ ಆಯೋಗದಿಂದ ಮಂಗಳೂರಿನ ಟವರ್ ಕ್ಲಾಕ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಂಸ್ತೆಯ ಮುಖ್ಯಸ್ಥರಾದ ರಫೀ ಉದ್ದೀನ್ ಕುದ್ರೋಳಿ, ಅಶ್ರಫ್.ಕೆ ( ಮಾಜಿ ಮೇಯರ್),ಅಬ್ದುಲ್ ನಾಸೀರ್ ಲಕ್ಗಿ ಸ್ಟಾರ್, ಅನ್ವರ್ ಸಾದತ್ ಬಜೆತ್ತೂರು, ಸುಹೈಲ್ ಕಂದಕ್, ಕೆ . ಕೆ. ಶಾಹುಲ್ ಹಮೀದ್, ಮೊಯ್ದೀನ್ ಬಾವಾ,ವಹಾಬ್ ಕುದ್ರೋಳಿ, ಹೈದರ್ ಪರ್ತಿಪ್ಪಾಡಿ ಮತ್ತಿತರರು ಮಾತನಾಡಿದರು. ಕೇಂದ್ರದ ಹಾಲಿ ವಕ್ಫ್ ತಿದ್ದುಪಡಿ ಮಸೂದೆ ಯಲ್ಲಿ ಗಂಭೀರ ಲೋಪಗಳಿದ್ದು ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬಿತ್ಯಾದಿ ಬೇಡಿಕೆ ಕೇಳಿಬಂತು. ವಿವಿಧ ಸಂಘಟನೆಗಳ ಪಕ್ಷಗಳ ಸದಸ್ಯರು ಉಪಸ್ಥಿತರಿದ್ದರು.