ಇತ್ತೀಚೆಗೆ ಜಿಲ್ಲೆಯಲ್ಲಿ ಭಿನ್ನ ಸಮುದಾಯದ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಒಂದೇ ವಾಹನದಲ್ಲಿ ಪ್ರಯಾಣಿಸುತ್ತಾರೆ ಎಂಬುದನ್ನು ಸ್ಥಳೀಯ ಸಮಾಜ ಘಾತುಕ ಶಕ್ತಿಗಳು ತಡೆದು ಹಲ್ಲೆ ನಡೆಸಿ,ಕಾನೂನನ್ನು ಕೈಗೆತ್ತಿಕೊಂಡು,ಅನೈತಿಕ ಪೊಲೀಸು ಗಿರಿಯನ್ನು ಪ್ರದರ್ಶಿಸಿದ್ದು ಈ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲೆ ಮತ್ತು ರಾಜ್ಯಾದ್ಯಂತ ಅನೈತಿಕ ಪೊಲೀಸು ಗಿರಿಯ ವಿರುದ್ಧ ನಡೆದ ವ್ಯಾಪಕ ಪ್ರತಿಭಟನೆ, ಇತ್ಯಾದಿ ಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವ್ಯತ್ಯಯ ವಾಗಾದಂತೆ ಪೊಲೀಸು ಇಲಾಖೆಗೆ ಮುಖ್ಯಮಂತ್ರಿಯವರು ಸೂಕ್ತ ಸಲಹೆ ನೀಡುವ ಬದಲು ಅನೈತಿಕ ಪೊಲೀಸು ಗಿರಿಯನ್ನು ಬಹಿರಂಗವಾಗಿ ಸಮರ್ಥಿಸುವ ಹೇಳಿಕೆ ನೀಡಿರುವುದು ಖಂಡನೀಯ.ಮುಖ್ಯ ಮಂತ್ರಿಯವರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿಯವರ ಹೇಳಿಕೆ ಬೇಜವಾಬ್ದಾರಿಯ ದ್ದಾಗಿದೆ ಕೆ.ಅಶ್ರಫ್
ಇನ್ನಷ್ಟು ವರದಿಗಳು
ಪುತ್ತೂರು ‘ ಅಶ್ರಫ್ ‘ ನಾಮಾಂಕಿತರ ಕರ್ನಾಟಕ ಒಕ್ಕೂಟ ಸಭೆ: ಜಿಲ್ಲಾವಾರು ಅಶ್ರಫರ ಹುಡುಕಾಟಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ಕರೆ.
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.