ಮಂಗಳೂರು: ಯುನಿವೆಫ್ ಕರ್ನಾಟಕ (ಎನ್. ಜಿ. ಓ) ಸಂಸ್ಥೆಯಿಂದ ನಗರಾದ್ಯಂತ ಇಂದು ‘ ಅರಿಯಿರಿ ಮನುಕುಲದ ಪ್ರವಾದಿ ‘ ಎಂಬ ಘೋಷ ವಾಕ್ಯದ ಅಡಿಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರ ಪ್ರಚಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬೀದಿ ಬದಿ ವಾಹನ ಜಾಥಾ ನಡೆಯಿತು. ಅಭಿಯಾನದ ಭಾಗವಾಗಿ ಪ್ರವಾದಿ ಮಹಮ್ಮದ್ ( ಸ. ಅ) ರವರ ಜೀವನ ಮಾರ್ಗ ಮತ್ತು ಮಾನವ ಸೌಹಾರ್ದತೆ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಜನಾಬ್ ರಫಿಯುದ್ದೀನ್ ಕುದ್ರೋಳಿ ಕಿರು ಪ್ರಭಾಷಣ ಗೈದರು.

ಅಭಯಾ ಎಂಬ ಸಂಸ್ಥೆಯ ಘಟಕವು ಪ್ರಚಾರ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಪ್ರಚಾರ ಅಭಿಯಾನದಲ್ಲಿ ಸಮವಸ್ತ್ರ ಧರಿಸಿದ ಅಭಾಯಾ ಕಾರ್ಯಕರ್ತರೂ ಭಾಗವಹಿಸಿದ್ದರು.
ತಾರೀಕು 06 ಜನವರಿ 2023 ರಂದು ಸಂಜೆ 6.45 ಕ್ಕೆ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು ಮಂಗಳೂರಿನ ಪುರಭವನ ಹಾಲ್ ನಲ್ಲಿ ನಡೆಯಲಿದ್ದು,ಮಾಜಿ ಸ್ಪೀಕರ್ ಆದ ರಮೇಶ್ ಕುಮಾರ್, ಫಾದರ್ ಪೀಟರ್ ಪೌಲ್ ಸಲ್ದಾನ ರು ಮತ್ತು ವಿವಿಧ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ.
ಇನ್ನಷ್ಟು ವರದಿಗಳು
ನಾವು ತೀವ್ರ ಸಂಧಿಗ್ಧತೆಯಲ್ಲಿದ್ದೇವೆ: ಪ.ಬಂ.ಮುಸ್ಲಿಂ ಕಾರ್ಮಿಕನನ್ನು “ಬಾಂಗ್ಲಾದೇಶಿ” ಎಂದು ಜೈಲಿನಲ್ಲಿ ಉಳಿಕೆ.ಕುಟುಂಬದ ವ್ಯಥೆ.
ಸಂವಿಧಾನ, ಷರಿಯಾ ಸಂರಕ್ಷಣೆಗಾಗಿ ಚಳುವಳಿ ಘೋಷಿಸಿದ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸಂಘಟನೆ
ತರಗತಿಯಲ್ಲಿ ಹಿಜಾಬ್, ಮುಸ್ಲಿಂ ವಿದ್ಯಾರ್ಥಿನಿ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್, ಶಿರವಸ್ತ್ರ ಇಸ್ಲಾಮಿನ ಪ್ರಮುಖ ಭಾಗ: ಮೌಲಾನಾ ಖಾಲಿದ್.