ಮಂಗಳೂರು : ಮಂಗಳೂರು ಕಂಡತ್ ಪಳ್ಳಿ ಜಮಾಅತ್ ಮಹಾಸಭೆಯು ನವೆಂಬರ್ 05 ಆದಿತ್ಯವಾರ, ನಿಕಟ ಪೂರ್ವ ನಿರ್ಗಮಿತ ಅಧ್ಯಕ್ಷರಾದ ಶಮೀಮ್ ರವರ ನೇತೃತ್ವದಲ್ಲಿ ನಡೆದು ಲೆಕ್ಕ ಪತ್ರ ಪರಿಶೋಧನೆ ಗೊಂಡು, ಹಾಲಿ ಕಮಿಟಿಯನ್ನು ವಿಸರ್ಜಿಸಿ ಮುಂದಿನ ಸಾಲಿನ ಅಧ್ಯಕ್ಷರಾಗಿ ಮಾಜಿ ಮೇಯರ್ ಕೆ ಅಶ್ರಫ್ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಸ್.ಎಂ. ಜಾಫರ್, ಪ್ರಧಾನ ಕಾರ್ಯದರ್ಶಿ ಯಾಗಿ ನಾಸಿರ್ ಕೊಪ್ಪಳ ಕಂಪೌಂಡ್, ಕೋಶಾಧಿಕಾರಿಯಾಗಿ ಕೆ ಶಮೀಮ್ ಅಹ್ಮದ್, ಜೊತೆ ಕಾರ್ಯದರ್ಶಿ ಯಾಗಿ ಇಮ್ರಾನ್,ಮುತವಲ್ಲಿಯಾಗಿ ಟೈಗರ್ ಪಾರೂಕ್ ಹಾಗೂ ಸದಸ್ಯರು ಗಳಾಗಿ ,ರಿಜ್ವಾನ್, ರಫೀಕ್,ಮಹ್ಮೂದ್ ರವರನ್ನು ಆಯ್ಕೆ ಮಾಡಲಾಯಿತು. ಮಸೀದಿಯ ಖತೀಬ್ ಪಿ. ಎ.ಮೊಹಮ್ಮದ್ ರಫೀಕ್ ಮದನಿರವರು ದುವಾ ನೆರವೇರಿಸಿದರು ಎಂದುಕಂಡತ್ ಪಳ್ಳಿ ಜಮಾಅತ್ ಮಂಗಳೂರು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
kannada news portal
ಇನ್ನಷ್ಟು ವರದಿಗಳು
ವಕ್ಫ್ ತಿದ್ದುಪಡಿ ಖಾಯಿದೆ: ವಿರೋಧಿಸಿ ಮಂಗಳೂರಿನಲ್ಲಿ ಯುನಿವೆಫ್, ಸಂಘಟನೆಗಳಿಂದ ಪ್ರತಿಭಟನೆ: ಪ್ರಮುಖರು ಭಾಗಿ.
ಅ – ಜನಿವಾರಿಕೆ ಘಟನೆ, ಖಂಡಿಸಿ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಮಂಗಳೂರಿನಲ್ಲಿ ಪ್ರತಿಭಟನೆ.
ಸರ್ವ ಬೆಂಬಲ – ಸಿದ್ಧತೆಯೊಂದಿಗೆ ಇಂದು ಮಂಗಳೂರಿನ ಅಡ್ಯಾರ್ ನಲ್ಲಿ ಬೃಹತ್ ವಕ್ಫ್ ತಿದ್ದುಪಡಿ ವಿರೋಧಿ ಸಮಾವೇಶ.