ಖತಾರ್: ಈಜಿಪ್ಟ್ ಮತ್ತು ಕತಾರ್ ದೇಶದ ಪ್ರಮುಖ ಸಮಾಲೋಚಕರು ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಹೊಸ ಎರಡು ದಿನಗಳ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ.
ಕದನ ವಿರಾಮದ ಒಂದು ವಾರದಲ್ಲಿ, ಗಾಝಾ ಪಟ್ಟಿಯಲ್ಲಿರುವ ನಿವಾಸಿಗಳು ಮುಂದೆ ಏನಾಗಬಹುದು ಎಂಬ ಭಯದಲ್ಲಿಯೇ ಜೀವಿಸುವಂತಾಗಿದೆ.
ಗಾಝಾದ ಮೇಲಿನ ‘ಜನಾಂಗೀಯ’ ಯುದ್ಧವನ್ನು ತಡೆಯಲು ಅಮೆರಿಕ ಸಾಕಷ್ಟು ಮಾಡುತ್ತಿಲ್ಲ: ವಿಶ್ಲೇಷಣೆ
ಕತಾರ್ನ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾನಿಲಯದ ಇಬ್ರಾಹಿಂ ಅಬುಶರೀಫ್, ರವರು ಅಲ್ ಜಝೀರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಗಾಝಾದ ಮೇಲೆ ತನ್ನ ಯುದ್ಧವನ್ನು ಮುಂದುವರೆಸುವುದನ್ನು ತಡೆಯಲು ಅಮೆರಿಕ, ಇಸ್ರೇಲ್ ಮೇಲೆ ಒತ್ತಡವನ್ನು “ಹೆಚ್ಚಳ” ಮಾಡಬೇಕಾಗಿದೆ ಎಂದು ಹೇಳಿದರು.
ಅಬ್ಬಾಸ್, ಬ್ಲಿಂಕನ್ ಜೊತೆಗಿನ ಭೇಟಿಯಲ್ಲಿ ಸಂಪೂರ್ಣ ಕದನ ವಿರಾಮವನ್ನು ಒತ್ತಾಯಿಸಿದ್ದಾರೆ.
ಪಲೇಸ್ಟಿನಿಯನ್ ಸ್ಟೇಟ್ ನ್ಯೂಸ್ ಏಜೆನ್ಸಿ ವಾಫಾದಲ್ಲಿನ ವರದಿಯ ಪ್ರಕಾರ, “ಗಾಜಾ ಮತ್ತು ಜೆರುಸಲೇಮ್ ಸೇರಿದಂತೆ ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿ ಆಕ್ರಮಣದ ಅಪರಾಧವನ್ನು ದಾಖಲಿಸುವ ಸಮಗ್ರ ಫೈಲ್” ಅನ್ನು ಪ್ಯಾಲೇಸ್ಟಿನಿಯನ್ ಅಥಾರಿಟಿ ಅಧ್ಯಕ್ಷರು ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಪ್ರಸ್ತುತಪಡಿಸಿದರು.
ಅಬ್ಬಾಸ್ ಗಾಝಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪಲೆಸ್ಟೀನಿಯನ್ನರ ಬಲವಂತದ ಸ್ಥಳಾಂತರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ, ಅಕ್ಟೋಬರ್ 7 ರಿಂದ ಅಲ್ಲಿ ನೆಲೆಸಿರುವವರಿಂದ ಹೆಚ್ಚಿನ ದಾಳಿಯಾಗಿದೇ ಎಂದರು.
ಗಾಝಾ ಮತ್ತು ವೆಸ್ಟ್ ಬ್ಯಾಂಕ್ ನಡುವಿನ ಏಕತೆಯನ್ನು ಅವರು ಒತ್ತಿ ಹೇಳಿದರು, “ಪಲೆಸ್ತೀನ್ ನಾಯಕತ್ವವು ಗಾಝಾದ ಜನರಿಗೆ ತನ್ನ ಜವಾಬ್ದಾರಿಯನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ವರದಿಗಳು
ಭಾರತೀಯ ಅಮೆರಿಕನ್ ಉದ್ಯಮಿ ಶ್ರೀರಾಮ ಕೃಷ್ಣನ್ ಅವರನ್ನು ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ ಟ್ರಂಪ್.
ಭವ್ಯ ವ್ಯಕ್ತಿ, ‘ನನ್ನ ಸ್ನೇಹಿತ’: ಪ್ರಧಾನಿ ಮೋದಿ-ಟ್ರಂಪ್ ಬಾಂಧವ್ಯ ಬಗ್ಗೆ ಬ್ರೋಮೆನ್ಸ್ ಪ್ರದರ್ಶನ.
ಖಾಲಿಸ್ತಾನಿ ಭಯೋತ್ಪಾದಕರು ಕೆನಡಾದಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಭಾವ: ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ.