ಬೆಂಗಳೂರು: ಫ್ಯಾಶಿಸ್ಟ್ ಸರ್ಕಾರದ ಕುತಂತ್ರದಿಂದ ದೇಶದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಒಂದಾಗಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆಯ ನಾಯಕರ ಬಂಧನವು ಫ್ಯಾಶಿಸ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರವನ್ನು ಸಾರುತ್ತದೆ. ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಎನ್.ಐ. ಎ ತನಿಖಾ ಸಂಸ್ಥೆಯು ಸಾಮಾಜಿಕ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವನ್ನು ಗುರಿಯಾಗಿಸಿ ದಾಳಿ ನಡೆಸಿ, ಅದರ ನಾಯಕರ ಬಂಧನದ ಹಿನ್ನೆಲೆಯಲ್ಲಿ ಅಥಾವುಲ್ಲಾ ಜೋಕಟ್ಟೆ ಈ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ವರದಿಗಳು
ದಕ ಜಿಲ್ಲೆ ನಿರಂತರ ಮತೀಯ ವಿಧ್ವೇಷ,ವ್ಯಕ್ತಿಹತ್ಯೆ, ಗುಂಪು ಹತ್ಯೆ ಸಾಮುದಾಯಿಕ ನಿರ್ಲಕ್ಷ್ಯ,ಜನ ಪ್ರತಿನಿಧಿ – ಕಾರ್ಯಕರ್ತ ರಿಂದ ಪಕ್ಷಕ್ಕೆ ರಾಜಿನಾಮೆ.
ಮತೀಯವಾದೀಕೃತ ಸಂತ್ರಸ್ತ ದ.ಕ.ಜಿಲ್ಲೆಯ ದುಸ್ಥಿತಿಯ ಬಗ್ಗೆ ಮು.ಮಂತ್ರಿಗಳಿಗೆ ಬಹಿರಂಗ ಪತ್ರ ರವಾನಿಸಿದ ಅಭಿವೃದ್ಧಿ ಪರರು.
ಕರಾವಳಿ ಕರ್ನಾಟಕ, ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ, ಮಂಗಳೂರಿನಲ್ಲಿ ಎರಡು ಇರಿತಗಳು