September 17, 2024

Vokkuta News

kannada news portal

ಮನಪಾ ಆಪರೇಶನ್ ಟೈಗರ್ ಬೀದಿಬದಿ ತೆರವು ಗೊಳಿಸುವಿಕೆ ಖಂಡನೀಯ: ಕೆ.ಅಶ್ರಫ್.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬೀದಿ ಬದಿ ಯಲ್ಲಿನ ಬಡ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರ ಗಾಡಿ ರಿಕ್ಷಾಗಳನ್ನು ಬುಲ್ಡೋಜರ್ ಉಪಯೋಗಿಸಿ ನಾಶ ಮಾಡುವ ಅನ್ಯಾಯ ಪ್ರಯತ್ನ ಖಂಡನೀಯ. ಮನಪ ಮೇಯರ್ ಅವರು ಪ್ರವಾಸದಲ್ಲಿರುವಾಗ ಅಧಿಕಾರಿಗಳು ನಡೆಸಿರುವ ಈ ಕಾರ್ಯಾಚರಣೆ ಸರಿಯಲ್ಲ ಹಲವಾರು ಕುಟುಂಬಗಳ ಜೀವನೋಪಾಯವನ್ನು ದುಸ್ತರತೆ ಗೊಳಿಸಿದ್ದು, ಬಡವರ ಜೀವಿತ ಹಕ್ಕನ್ನು ಕಸಿಯಲಾಗಿದೆ

ಮನಪಾ ದ ಈ ಪ್ರಯತ್ನ ಅಮಾನವೀಯ. ಬಡವರ ದುಡಿಮೆಯನ್ನು ಹತ್ತಿಕ್ಕಿ ಅವರ ಹೊಟ್ಟೆಗೆ ಕಲ್ಲು ಹಾಕುವ ಮನಪಾ ಜನ ವಿರೋಧಿ ಕೃತ್ಯ ತೀವ್ರ ಖಂಡನೀಯ . ಮನಪಾ ತಕ್ಷಣ ತನ್ನ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.