ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬೀದಿ ಬದಿ ಯಲ್ಲಿನ ಬಡ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರ ಗಾಡಿ ರಿಕ್ಷಾಗಳನ್ನು ಬುಲ್ಡೋಜರ್ ಉಪಯೋಗಿಸಿ ನಾಶ ಮಾಡುವ ಅನ್ಯಾಯ ಪ್ರಯತ್ನ ಖಂಡನೀಯ. ಮನಪ ಮೇಯರ್ ಅವರು ಪ್ರವಾಸದಲ್ಲಿರುವಾಗ ಅಧಿಕಾರಿಗಳು ನಡೆಸಿರುವ ಈ ಕಾರ್ಯಾಚರಣೆ ಸರಿಯಲ್ಲ ಹಲವಾರು ಕುಟುಂಬಗಳ ಜೀವನೋಪಾಯವನ್ನು ದುಸ್ತರತೆ ಗೊಳಿಸಿದ್ದು, ಬಡವರ ಜೀವಿತ ಹಕ್ಕನ್ನು ಕಸಿಯಲಾಗಿದೆ
ಮನಪಾ ದ ಈ ಪ್ರಯತ್ನ ಅಮಾನವೀಯ. ಬಡವರ ದುಡಿಮೆಯನ್ನು ಹತ್ತಿಕ್ಕಿ ಅವರ ಹೊಟ್ಟೆಗೆ ಕಲ್ಲು ಹಾಕುವ ಮನಪಾ ಜನ ವಿರೋಧಿ ಕೃತ್ಯ ತೀವ್ರ ಖಂಡನೀಯ . ಮನಪಾ ತಕ್ಷಣ ತನ್ನ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವರದಿಗಳು
ಪ್ರವಾದಿ ಮುಹಮ್ಮದ್ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್ ಮುಸ್ಲಿಂ ಪ್ರಚಾರ.
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ