ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬೀದಿ ಬದಿ ಯಲ್ಲಿನ ಬಡ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರ ಗಾಡಿ ರಿಕ್ಷಾಗಳನ್ನು ಬುಲ್ಡೋಜರ್ ಉಪಯೋಗಿಸಿ ನಾಶ ಮಾಡುವ ಅನ್ಯಾಯ ಪ್ರಯತ್ನ ಖಂಡನೀಯ. ಮನಪ ಮೇಯರ್ ಅವರು ಪ್ರವಾಸದಲ್ಲಿರುವಾಗ ಅಧಿಕಾರಿಗಳು ನಡೆಸಿರುವ ಈ ಕಾರ್ಯಾಚರಣೆ ಸರಿಯಲ್ಲ ಹಲವಾರು ಕುಟುಂಬಗಳ ಜೀವನೋಪಾಯವನ್ನು ದುಸ್ತರತೆ ಗೊಳಿಸಿದ್ದು, ಬಡವರ ಜೀವಿತ ಹಕ್ಕನ್ನು ಕಸಿಯಲಾಗಿದೆ
ಮನಪಾ ದ ಈ ಪ್ರಯತ್ನ ಅಮಾನವೀಯ. ಬಡವರ ದುಡಿಮೆಯನ್ನು ಹತ್ತಿಕ್ಕಿ ಅವರ ಹೊಟ್ಟೆಗೆ ಕಲ್ಲು ಹಾಕುವ ಮನಪಾ ಜನ ವಿರೋಧಿ ಕೃತ್ಯ ತೀವ್ರ ಖಂಡನೀಯ . ಮನಪಾ ತಕ್ಷಣ ತನ್ನ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವರದಿಗಳು
ಇಲಾಖೆಗಳಲ್ಲಿ ಸಂವಹನ: ಆಯುಕ್ತರ ಕಚೇರಿಗೆ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ದ.ಕ.ಜಿಲ್ಲಾಡಳಿತ ಕಚೇರಿಗಳಲ್ಲಿ ಸುಗಮ ಸಂವಹನಕ್ಕಾಗಿ ಕಲಾರಂಗ ನಿಯೋಗದಿಂದ ಬ್ಯಾರಿ ಭಾಷೆ ಪಡಿಕೊರು ಕೃತಿ ವಿತರಣೆ.
ಡಾ.ಕಯ್ಯಾರ ಕಿಞ್ಞಣ್ಣ ರೈ ಜಯಂತಿಯಲ್ಲಿ ಅಝೀಝ್ ಬೈಕಂಪಾಡಿ ರಚಿತ ಬ್ಯಾರಿ ಭಾಷೆ ಪಡಿಕೊರು ಕೃತಿ ಹಂಚಿಕೆ.