ಮಂಗಳೂರು: ಹಿರಿಯ ಸಾಹಿತಿ,ಕಲಾವಿದ ಸಂಘಟಕ, ಬ್ಯಾರಿ ಕಲಾರಂಗ ಸಂಸ್ಥೆ, ಅಖಿಲ ಭಾರತ ಬ್ಯಾರಿ ಮಹಾಸಭಾ ಅಧ್ಯಕ್ಷ ರಚಿತ ಕೃತಿ ‘ ಬ್ಯಾರಿ ಭಾಷೆ ಪಡಿ ಕೂರು’ ಎಂಬ ಪದಪುಂಜ ವನ್ನು ಇಂದು ಮಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ , ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ರೈ ಅವರು ಬಿಡುಗಡೆ ಗೂಳಿಸಿದರು. ಅಝೀಝ್ ಬೈಕಂಪಾಡಿ ಅವರು ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗದಲ್ಲಿ ತನ್ನ ತೊಡಗಿಸಿ ಕೊಂಡಿದ್ದು, ಬ್ಯಾರಿ ದಿನವಹಿ ಬಳ ಕೆಯ ಪದಗಳ ಪುಂಜ ವನ್ನು ಹೊಂದಿದ ಈ ಕೃತಿಯನ್ನು ಉಚಿತ ಹಂಚಿಕೆಗಾಗಿ ರಚಿಸಿದ್ದು, ಸರಕಾರಿ ಇಲಾಖೆ, ಗ್ರಂಥಾಲಯ, ಗಡಿನಾಡು ಕೇರಳದಲ್ಲಿ ಕೂಡ ವಿತರಣೆಯ ಉದ್ದೇಶದಲ್ಲಿ ಮುದ್ರಿಸಲಾಗಿದ್ದು, ಈ ಕೃತಿಯಿಂದಾಗಿ ಸರಕಾರಿ ನೌಕರರು ಇತರ ಭಾಷಿಕರು ಬ್ಯಾರಿ ಭಾಷೆ ಕಲಿಯುವ ಪ್ರಯೋಜನ ಪಡೆಯಲಿದ್ದಾರೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಹೇಳಿದರು. ಅಥಿತಿಗಳಾಗಿ ಹಿರಿಯ ಸಾಹಿತಿ ಮಹಮ್ಮದ್ ಬಡ್ಡುರು, ದ.ಕ.ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್, ಬ್ಯಾರಿ ಕಲಾರಂಗದ ಉಪಾಧ್ಯಕ್ಷ.ರಾದ ಸತೀಶ್ ಸುರತ್ಕಲ್ ಡಾ. ಸಿದ್ದೀಕ್ ಗುರುಪುರ, ಇಸ್ಮಾಯಿಲ್ ಮೂಡು ಶೆಡ್ಡೆ , ಶಾಹುಲ್ ಹಮೀದ್ ತಾಲೀಮು ಉಸ್ತಾದ್ ರವರು ಉಪಸ್ಥಿತರಿದ್ದರು.
kannada news portal
ಇನ್ನಷ್ಟು ವರದಿಗಳು
ಕೋಟೆಪುರ – ಬೋಳಾರ ಸೇತುವೆ, ₹200 ಕೋ.ಯೋಜನೆಗೆ ರಾಜ್ಯ ಅನುಮೋದನೆ,ಜಿಲ್ಲಾ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ದಿನೇಶ್ ಗುಂಡೂರಾವ್.
ಮರ್ಚೆಂಟ್ ಶಿಪ್ಪಿಂಗ್ ಮಸೂದೆ ಮಂಗಳೂರಿನ ಕಡಲ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುಲಿದೆ: ಕ್ಯಾಪ್ಟನ್ ಚೌಟ
ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಯಾರೂ ಪ್ರತ್ಯುತ್ತರ ನೀಡಲಿಲ್ಲ. ಒಟ್ಟು”ಶಾಂತಿ ಸಭೆ” ನಡೆಯಿತು: ಮುನೀರ್ ಕಾಟಿಪಳ್ಳ.