September 7, 2024

Vokkuta News

kannada news portal

ಸಕಲೇಶಪುರ ಮೌಲ್ವಿ ದಾರಿಮಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ.

ಸಕಲೇಶಪುರ ತಾಲೂಕಿನ ಸುಂಡಕೆರೆ ಗ್ರಾಮದ ಮೌಲ್ವಿ ಅಬ್ದುಲ್ ನಾಸಿರ್ ದಾರಿಮಿ ಮೇಲೆ ಇಂದು ಖಾಸಗಿ ವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು,ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಹಲ್ಲೆ ನಡೆಸಿರುತ್ತಾರೆ. ಈ ಕೃತ್ಯ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಹಾಗೂ ಅಶಾಂತಿಯನ್ನು ಕದಡುವ ಮುಂದುವರಿದ ಭಾಗವಾಗಿದೆ. ದುಷ್ಕರ್ಮಿಗಳ ಈ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುವುದಲ್ಲದೆ, ಕೂಡಲೆ ದುಷ್ಕರ್ಮಿಗಳನ್ನು ಪೊಲೀಸು ಇಲಾಖೆ ಬಂಧಿಸಬೇಕು ಎಂದು ಆಗ್ರಹಿಸುತ್ತದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.